ಅನಾರೋಗ್ಯದ ಸಮಸ್ಯೆ ಇರುವವರು ಬುಧವಾರದಂದು ಈ ಬೇರನ್ನು ಪೂಜೆ ಮಾಡಿ ಕೈಗೆ ಕಟ್ಟಿಕೊಳ್ಳಿ

ಭಾನುವಾರ, 9 ಜೂನ್ 2019 (07:18 IST)
ಬೆಂಗಳೂರು : ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಬುಧವಾರದಂದು ಈ ಪರಿಹಾರವನ್ನು ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.



ಬುಧವಾರದಂದು ಬೆಳಿಗ್ಗೆ ಉತ್ತರಾಣಿ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು  ಶ್ರೀಗಂಧವನ್ನು ಹಚ್ಚಿ. ಬಳಿಕ ಅರಶಿನ ಕುಂಕುಮದ ಬೊಟ್ಟನ್ನು ಇಡಬೇಕು. ಬಳಿಕ ಅದಕ್ಕೆ ಧೂಪದ ಹೊಗೆಯನ್ನು ಹಿಡಿದು ಓಂ ಭುಂ ಬುಧಾಯ ನಮಃ ಎಂದು  ಪೂಜೆಯನ್ನು ಮಾಡಬೇಕು.

 

ಆಮೇಲೆ ಆ ಬೇರನ್ನು ತೆಗೆದುಕೊಂಡು ಹಸಿರು ದಾರವನ್ನು ಕಟ್ಟಿ  ಗಂಡಸರು ಬಲ ಕೈಗೆ ಹಾಗೂ ಹೆಂಗಸರು ಎಡಕೈಗೆ ಕಟ್ಟಿಕೊಳ್ಳಬೇಕು. ನಂತರ ಸಂಜೆಯ ವೇಳೆ ನಿಮ್ಮ ವ್ಯಾಪಾರದ ಸ್ಥಳದ ಮುಖ್ಯದ್ವಾರಕ್ಕೆ ಉಳಿದ ಬೇರನ್ನು ಹಸಿರು ದಾರದ ಸಹಾಯದಿಂದ ಕಟ್ಟಬೇಕು. ಹೀಗೆ ಮಾಡಿದರೆ ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ