ಇಂದಿನ ರಾಶಿ ಭವಿಷ್ಯ ಹೀಗಿದೆ

ಬುಧವಾರ, 22 ಜುಲೈ 2020 (08:10 IST)
Normal 0 false false false EN-US X-NONE X-NONE

ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
 

*ಮೇಷರಾಶಿ: ಇಂದು ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷ ನೀಡಬಹುದು. ನಿಮ್ಮ ಜೊತೆಗಿರುವವರ ಜೊತೆ ವಾದವಿವಾದಕ್ಕೆ ತೊಡಗಬೇಡಿ.

*ವೃಷಭ ರಾಶಿ:ನಿಮ್ಮ ಜೀವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು. ಅದು ಯಶಸ್ವಿಯಾಗಲಿದೆ.  

*ಮಿಥುನ ರಾಶಿ : ಇಂದು ದಿನದ ಆರಂಭವು ಚೆನ್ನಾಗಿ ಆಗಿದ್ದರೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು. ಇದರಿಂದ ನೀವು ತೊಂದರೆಗೊಳಗಾಗಬಹುದು.

*ಕಟಕ ರಾಶಿ : ಇಂದು ನಿಮಗೆ ಸಹೋದರರ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ. ಒಂದು ಹಳೆಯ ಸಂಪರ್ಕ ನಿಮಗೆ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು.

*ಸಿಂಹ ರಾಶಿ : ನಿಮ್ಮ ಹಠದಿಂದ ಸಮಯ ವ್ಯರ್ಥವಾಗುವುದರಿಂದ ಅದನ್ನು ನಿಮ್ಮ ಜೀವನದಿಂದ ತೊರೆದುಬಿಡಿ.ಹಣವನನ್ಉ ಯೋಚಿಸದೆ ಖರ್ಚುಮಾಡುವುದು ನಿಮಗೆ ನಷ್ಟವನ್ನುಂಟುಮಾಡುತ್ತದೆ ಎಂಬುದು ನಿಮಗೆ ಇಂದು ತಿಳಿಯುತ್ತದೆ.

*ಕನ್ಯಾ ರಾಶಿ : ಮನೆಯಲ್ಲಿ ನಡೆಯುವ ಕಾರ್ಯಕ್ರಮದಿಂದ ನಿಮ್ಮ ಹಣ ಖರ್ಚಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಸ್ಥಿತಿ ಹದಗೆಡಬಹುದು.

*ತುಲಾ ರಾಶಿ : ಬಯಸದೆ ಇರುವ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು. ಇಂದು ನಿಮ್ಮ ಏಕಾಗ್ರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಯಶಸ್ಸು ಪಡೆಯಲು ಪಟ್ಟುಬಿಡದೆ ಕೆಲಸ ಮಾಡಬೇಕು.

*ವೃಶ್ಚಿಕ ರಾಶಿ : ಇಂದು ನಿಮ್ಮ ಖಷಿಯ ಸ್ವಭಾವ ನಿಮ್ಮ ಜೊತೆಗಿರುವವರಿಗೆ ಖುಷಿಯನ್ನು ತಂದುಕೊಡುತ್ತದೆ. ಯಾವುದೇ ಜಂಟಿ ಯೋಜನೆಯಲ್ಲಿ ಭಾಗವಹಿಸಬೇಡಿ. ಇದರಿಂದ ಪಾಲುದಾರರು ನಿಮ್ಮಿಂದ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.

*ಧನು ರಾಶಿ : ಹಳೆಯ ಸ್ನೇಹಿತರ ಜೊತೆಗಿನ ಒಂದು ಪುನರ್ಮಿಲನ ನಿಮ್ಮನ್ನು ಚೇತೋಹಾರಿಯಾಗಿರಿಸುತ್ತದೆ. ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ.

*ಮಕರ ರಾಶಿ : ಇಂದು ಸಹದ್ಯೋಗಿಗಳ ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಚೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ. ಇಂದು ನಿಮಗೆ ಅಚ್ಚರಿಯ ಕೊಡುಗೆಗಳು ಸಿಗಬಹುದು.

*ಕುಂಭ ರಾಶಿ : ಇಂದು ನೀವು ದೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ. ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಎಲ್ಲರ ಜೊತೆ ತೊಡಗಿಕೊಳ್ಳುವುದು ನಿಮಗೆ ಇಷ್ಟವಾದರೂ ಇದರಿಂದ ಖರ್ಚು ಹೆಚ್ಚಾಗಬಹುದು ಎಚ್ಚರ.

* ಮೀನ ರಾಶಿ : ಇಂದು ಮನೆಯ ಯಾರೋ ಆಪ್ತರೊಂದಿಗೆ ನಿಮಗೆ ವಿವಾದವಾಗಬಹುದು.ಇದರಿಂದ ನಿಮ್ಮ ಮನಸ್ಥಿತಿ ತೊಂದರೆಗೊಳಗಾಗಬಹುದು. ನಿಮ್ಮ ಕಣ್ಣೀರನ್ನು ಒಬ್ಬ ವಿಶೇಷ ಸ್ನೇಹಿತ ಒರೆಸಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ