ಮಹಿಳೆಯರಿಗೆ ಗೌರವ ಸಿಗಲು ಈ ದಿನ ಈ ಕುಂಕುಮವನ್ನು ಧಾರಣೆ ಮಾಡಿ

ಭಾನುವಾರ, 16 ಆಗಸ್ಟ್ 2020 (07:20 IST)
ಬೆಂಗಳೂರು : ಮುತ್ತೈದೆಯರು ಹಣೆಗೆ ಕುಂಕುಮ ಇಟ್ಟರೆ ಅವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ.  ಹಾಗೇ ಅವರನ್ನು ಅದೃಷ್ಟಲಕ್ಷ್ಮೀ ಅಂತಾನೆ ಕರೆಯುತ್ತಾರೆ. ಮಹಿಳೆಯರು ಇದರಿಂದ ಬೊಟ್ಟನ್ನು  ಇಟ್ಟರೆ ಇನ್ನೂ ಉತ್ತಮ.

ಮಂಗಳವಾರ ಅಥವಾ ಶುಕ್ರವಾರದಂದು ಅಶ್ವಗಂಧ ಪುಡಿ ಮತ್ತು ತುಳಸಿ ಎಲೆ ಪುಡಿ, ರಕ್ತ ಚಂದನ ಪುಡಿ ಇವಿಷ್ಟನ್ನು ಮಿಕ್ಸ್ ಮಾಡಿ ಲಕ್ಷ್ಮೀಯ ಫೋಟೋದ ಕೆಳಗೆ ಇಡಿ. ಮರುದಿನ ಪೂಜೆ ಮಾಡಿದ ಬಳಿಕ ಈ ಕುಂಕುಮ ಹಚ್ಚಿ. ಇದರಿಂದ ಆ ಮಹಿಳೆ ದೈವಸ್ವರೂಪಳಂತೆ ಕಾಣುತ್ತಾಳೆ. ಅವರ ಮಾತನ್ನು ಬೇರೆಯವರು ಕೇಳುತ್ತಾರೆ. ಅವರಲ್ಲಿ ಸಕರಾತ್ಮಕ ಶಕ್ತಿ ತಾಂಡವಾಡುತ್ತಿರುತ್ತದೆ. ಅವಳು ಮಾಡಿದ ಎಲ್ಲಾ ಕೆಲಸ ಯಶಸ್ಸು ಕಾಣುತ್ತದೆ.

 

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ