ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 24 ಡಿಸೆಂಬರ್ 2018 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮಕ್ಕಳ ಭವಿಷ್ಯದ ಬಗ್ಗೆ ಹೊಸ ಯೋಜನೆಯೊಂದನ್ನು ರೂಪಿಸುವಿರಿ. ವೃತ್ತಿ ರಂಗದಲ್ಲಿ ಕೊಂಚ ಅಡೆತಡೆಯುಂಟಾದೀತು. ಆದರೆ ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ವೃಷಭ: ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನದಿಂದ ಶುಭ ಸಮಾಚಾರ ಕೇಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.

ಮಿಥುನ: ಕುಟುಂಬದವರೊಂದಿಗೆ ವೈಮನಸ್ಯಕ್ಕೆ ಎಡೆಮಾಡಿ ಕೊಡದಿರಿ.ವೃತ್ತಿ ರಂಗದಲ್ಲಿ ಅಪವಾದದ ಭೀತಿ ಇದೆ. ದೇವರ ಪ್ರಾರ್ಥನೆಯಿಂದ ಎಲ್ಲವೂ ಮಂಗಲವಾಗಲಿದೆ.

ಕರ್ಕಟಕ: ಧನಾಗಮನವಾಗಿ ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಇಂದು ಲಾಭ.

ಸಿಂಹ: ಬೇಡದ ಕೆಲಸಗಳ ಬಗ್ಗೆ ಆಲೋಚನೆ ಮಾಡುವಿರಿ. ಮನೆಯವರಿಂದ ಸಹಕಾರ ಸಿಕ್ಕಿ ಅಂದುಕೊಂಡ ಕೆಲಸಗಳು ನೆರವೇರುವುದು. ಕಾರ್ಯದೊತ್ತಡವಿದ್ದರೂ ಆಲಸ್ಯ ಮಾಡುವುದು ಬೇಡ.

ಕನ್ಯಾ: ನೀವು ಅಂದುಕೊಂಡ ಕೆಲಸಗಳು ನೆರವೇರಲಿವೆ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಭಯ ಕಾಡುವುದು. ಆದರೆ ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಿಸಲಿದೆ.

ತುಲಾ: ಕೌಟುಂಬಿಕ ಕೆಲಸಗಳಲ್ಲಿ ಭಾಗವಹಿಸಿ ಯಶಸ್ಸು ಕಾಣುವಿರಿ. ಮನೆಯಲ್ಲಿ ಸಂತಸದ ವಾತಾವರಣವಿರಬಹುದು. ಎಷ್ಟೋ ದಿನಗಳ ಸಮಸ್ಯೆಗೆ ಪರಿಹಾರ ಸಿಗುವುದು.

ವೃಶ್ಚಿಕ: ಧನಾಗಮನವಿದ್ದರೂ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ. ದೂರ ಸಂಚಾರ ಕೈಗೊಳ್ಳುವಿರಿ, ಆದರೆ ಎಚ್ಚರ ಅಗತ್ಯ.

ಧನು: ಉದ್ಯೋಗದಲ್ಲಿ ಬಡ್ತಿ ಸಿಕ್ಕಿ ಆರ್ಥಿಕವಾಗಿ ಸುಧಾರಣೆ ಕಂಡು ಮನೆಯಲ್ಲಿ ಸಂತಸದ ವಾತಾವರಣವಿರುವುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ದೇವತಾ ಆರಾಧನೆ ಮಾಡಿ.

ಮಕರ: ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಬಹುದು. ಧನಾಗಮನವಾದಷ್ಟೇ ಖರ್ಚುಗಳೂ ಕಂಡಬರುವುದು. ವಾದ ವಿವಾದಗಳಿಂದ ಆದಷ್ಟು ದೂರವಿರಿ.

ಕುಂಭ: ಇಂದು ಹೊಸ ಕೆಲಸಗಳು, ಸಂಬಂಧಗಳಿಗೆ ಕೈ ಹಾಕದೇ ಇರುವುದೇ ಒಳ್ಳೆಯದು. ಅನವಶ್ಯಕವಾಗಿ ನಿಮ್ಮದಲ್ಲದ ತಪ್ಪಿನಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹೀಗಾಗಿ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿ.

ಮೀನ: ಸಂಗಾತಿಯೊಡನೆ ಭಿನ್ನಾಭಿಪ್ರಾಯ ಮೂಡಲಿದೆ. ಇದರಿಂದ ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ದೇವತಾ ಆರಾಧನೆ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ