ಮಾಟ ಮಂತ್ರ ಮಾಡಿದರೆ ಏನು ಪರಿಹಾರ?

ಶುಕ್ರವಾರ, 1 ನವೆಂಬರ್ 2019 (08:25 IST)
ಬೆಂಗಳೂರು: ನಮಗೆ ಆಗದೇ ಇರುವವರು ಯಾರೋ ಮಾಟ ಮಂತ್ರ ಮಾಡಿದಾಗ ಅದರಿಂದ ಹೊರಬರಲು ಅಥವಾ ಅದು ನಮ್ಮ ಮೇಲೆ ಪ್ರಭಾವ ಬೀರದೇ ಇರಲು ಏನು ಮಾಡಬೇಕು?


ದೇವರ ಮನೆಯಲ್ಲಿ ಗಣೇಶನ ವಿಗ್ರಹ ಸ್ಥಾಪಿಸುವ ಮೊದಲು ಆ ಜಾಗದಲ್ಲಿ ಕಲ್ಲುಪ್ಪು ಹಾಕಿದರೆ ಧನಾತ್ಮಕ ಶಕ್ತಿ ಹೆಚ್ಚುವುದು. ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಹೂವು ಅರ್ಪಿಸಿದರೆ ದುಷ್ಟ ಶಕ್ತಿ ದೂರ ಮಾಡಬಹುದು.

ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ದೂರ ಮಾಡಲು ಉಪ್ಪು ಸಹಕಾರಿ. ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಒರೆಸಿ. ಎರಡೂ ಕೈಗಳಲ್ಲಿ ಕಲ್ಲುಪ್ಪನ್ನು ಹಿಡಿದು ಗಟ್ಟಿಯಾಗಿ ಮುಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಉಪ್ಪನ್ನು ವಾಶ್ ಬೇಸಿನ್ ಗೆ ಎಸೆಯಿರಿ.

ಅದೇ ರೀತಿ ಮನೆ ಪಕ್ಕ ನಿಂಬೆ ಹಣ್ಣು, ಕುಂಕುಮ ಇತ್ಯಾದಿ ಇದ್ದರೆ ಮೊದಲು ಅದಕ್ಕೆ ಸೆಗಣಿ ನೀರು ಚಿಮುಕಿಸಿ. ಬಳಿಕ ಅದನ್ನು ನದಿಯಲ್ಲಿ ವಿಸರ್ಜಿಸಿ. ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಸಾಕು ಪ್ರಾಣಿ ಸಾಕಿದರೆ ಮಾಟ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ