ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!

ಭಾನುವಾರ, 4 ಆಗಸ್ಟ್ 2019 (07:25 IST)
ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ  ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ದೂರವಾಗಬಹುದು.

 
ಉಪ್ಪು ದಾನ ಮಾಡಿದವರು ಚಿತ್ರಗುಪ್ತನೇ ಮೊದಲುಗೊಂಡು ಇಡೀ ಯಮನ ಪರಿವಾರವನ್ನು ತೃಪ್ತಿಪಡಿಸಿದಂತಾಗುತ್ತದೆ. ಭತ್ತ, ಗೋಧಿ, ಹೆಸರು, ಉದ್ದು, ಅರಿಶಿನ, ಕಡಲೆ, ಜವೆ, ಈ ಧಾನ್ಯಗಳ ದಾನದಿಂದ ಸೌಮ್ಯ ಸೌರಿಪುರ, ಮೊದಲಾದ ನಗರಗಳ ದ್ವಾರದಲ್ಲಿರುವ ಪಾಲಕರು ತೃಪ್ತರಾಗುವರು.

ಇನ್ನು ಕೊಡೆ, ಪಾದರಕ್ಷೆ, ವಸ್ತ್ರ, ಮುದ್ರಿಕೆ, ಕಮಂಡಲು, ಪೀಠ, ಪಂಚಪಾತ್ರೆ, ತಾಮ್ರಪತ್ರೆ, ಅಕ್ಕಿ, ದನ, ಜನಿವಾರ ಹೀಗೆ ಒಂದೊಂದು ದಾನದಿಂದ ಒಂದೊಂದು ರೀತಿಯ ಫಲವನ್ನು ಪಡೆಯುತ್ತಾ ಹೋಗುತ್ತಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ