ರುದ್ರಾಭಿಷೇಕ ಮಾಡುವುದು ಹೇಗೆ? ಯಾವಾಗ?

ಶುಕ್ರವಾರ, 8 ಮಾರ್ಚ್ 2019 (08:44 IST)
ಬೆಂಗಳೂರು: ಶಿವನಿಗೆ ಪ್ರಿಯವಾದ ರುದ್ರಾಭಿಷೇಕ ಮಾಡುವುದರಿಂದ ಸಕಲ ಪಾಪ ಪರಿಹಾರವಾಗಿ ಜೀವನದಲ್ಲಿ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಿದ್ದರೆ ರುದ್ರಾಭಿಷೇಕ ಯಾವಾಗ? ಹೇಗೆ ಮಾಡಬೇಕು? ಇಲ್ಲಿ ನೋಡಿ.


ಯಾವುದೇ ದಿನ ಅಥವಾ ಸೋಮವಾರ, ಶಿವರಾತ್ರಿ ದಿನ ರುದ್ರಾಭಿಷೇಕ ಮಾಡುವುದು ವಿಶೇಷವೇ. ರುದ್ರಾಭಿಷೇಕದಲ್ಲಿ ಬಳಕೆಯಾಗುವುದು ಶುದ್ಧ ನೀರು. ಶುದ್ಧ ನೀರಿಗೆ ಸಾಧ್ಯವಾದರೆ ಸ್ವಲ್ಪ ಗಂಗಾ ತೀರ್ಥ, ತುಳಸಿ, ಎಳೆನೀರು, ಯಾವುದೇ ಹಣ್ಣಿನ ರಸ,ಹಾಲು, ಮೊಸರು, ತುಪ್ಪ, ಜೇನು, ಗಂಧ, ವಿಭೂತಿ ಇತ್ಯಾದಿ ಸೇರಿಸಬಹುದು.

ಈ ಪವಿತ್ರ ನೀರನ್ನು ಒಂದು ಬೆಳ್ಳಿ ಚಮಚ ಅಥವಾ ಧಾರಾ ಪಾತ್ರೆ ಬಳಸಿ ಶಿವಲಿಂಗದ ಶಿರಕ್ಕೆ ಸತತವಾಗಿ ಬೀಳುವಂತೆ ನೋಡಿಕೊಳ್ಳಬೇಕು. ನಂತರ ಶಿವಸಹಸ್ರನಾಮವನ್ನು ಭಕ್ತಿಯಿಂದ ಪಠಿಸುತ್ತಾ, ಏಕಾಗ್ರತೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾ ಬನ್ನಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ