ವಿಶ್ವಕರ್ಮ ಜಯಂತಿ: ವಿಶ್ವಕರ್ಮ ಶಿವ ಮತ್ತು ವಿಷ್ಣುವಿಗೆ ನಿರ್ಮಿಸಿಕೊಟ್ಟ ಎರಡು ಆಯುಧಗಳು ಯಾವುದು?

ಶನಿವಾರ, 17 ಸೆಪ್ಟಂಬರ್ 2022 (09:20 IST)
ಬೆಂಗಳೂರು: ಇಂದು ವಿಶ್ವಕರ್ಮ ಜಯಂತಿ. ದೇವತೆಗಳ ವಾಸ್ತು ತಜ್ಞ ವಿಶ್ವಕರ್ಮ ಜಯಂತಿ ದಿನ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು.

ದೇವರ ವಾಸ ಸ್ಥಾನ, ಆಯುಧಗಳ ಶಿಲ್ಪಿ ವಿಶ್ವಕರ್ಮ. ಆತನೇ ಆಧುನಿಕ ವಾಸ್ತು ಶಿಲ್ಪಿಗಳಿಗೆ ಪ್ರೇರಕ ದೇವರು. ಇಡೀ ವಿಶ್ವದ ನಿರ್ಮಾತೃ ವಿಶ್ವಕರ್ಮ ಎಂಬ ನಂಬಿಕೆ ಹಿಂದೂಗಳಲ್ಲಿದೆ.

ಆತ ಕೈಲಾಸ ವಾಸ ಶಿವನಿಗೆ ಪಿನಾಕ ಮತ್ತು ಮಹಾವಿಷ್ಣುವಿಗೆ ಸುದರ್ಶನ ಚಕ್ರದ ವಿನ್ಯಾಸ ಮಾಡಿಕೊಟ್ಟವನು ಎಂಬ ನಂಬಿಕೆಯಿದೆ. ನಮ್ಮೆಲ್ಲರಿಗೆ ಪ್ರೇರಕನಾದ ವಿಶ್ವ ಕರ್ಮ ಜಯಂತಿಯ ಶುಭಾಶಯಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ