ಪ್ರತಿ ಭಾರತೀಯನಲ್ಲಿ ಶ್ರೀರಾಮನಿದ್ದಾನೆ ಎಂದ ಪ್ರಧಾನಿ ಮೋದಿ

ಬುಧವಾರ, 5 ಆಗಸ್ಟ್ 2020 (16:26 IST)
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.


ಸರಯೂ ನದಿಯ ದಂಡೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಲಿದೆ ಎಂದು ಮೋದಿ,  ಹಿರಿಯರ ಬಲಿದಾನ ಹಾಗೂ ಹೋರಾಟಗಳಿಂದ ನಾವಿಂದು ರಾಮರಾಜ್ಯದ ಕನಸು ನನಸು ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ರಾಮಲಲ್ಲಾನಿಗಾಗಿ ಮಂದಿರ ನಿರ್ಮಾಣಗೊಳ್ಳುವ ಮೂಲಕ ದೇಶದ ಸಂಸ್ಕೃತಿ ಮತ್ತೆ ವಿಶ್ವದಲ್ಲಿ ಕಂಗೊಳಿಸಲಿದೆ ಎಂದು ಹೇಳಿದ್ದು, ದೇಶದ ಪ್ರತಿ ಭಾರತೀಯನಲ್ಲಿ ಶ್ರೀರಾಮನಿದ್ದಾನೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ