ಆಸ್ಕರ್ ಪ್ರಶಸ್ತಿ ಗೆಲ್ಲುವ ದಿನಗಳು ದೂರವಿಲ್ಲ: ನುಲಿದ ವಿದ್ಯಾಬಾಲನ್

ಬುಧವಾರ, 5 ಮಾರ್ಚ್ 2014 (16:20 IST)
PR
ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತೇನೆ ಎನ್ನುವ ಬಗ್ಗೆ ಭರವಸೆಯಿರಲಿಲ್ಲ. ಅದು ತಾನಾಗಿ ದೊರೆತಿದೆ. ಅದರಂತೆ ಆಸ್ಕರ್ ಪ್ರಶಸ್ತಿ ಕೂಡಾ ಪಡೆಯುವ ದಿನಗಳು ದೂರವಿಲ್ಲ ಎಂದು ಬಾಲಿವುಡ್‌ನ ಹಾಟ್ ನಟಿ ವಿದ್ಯಾ ಬಾಲನ್ ನುಲಿದಿದ್ದಾರೆ.

PR
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಮೇ 1 ರಿಂದ ಮೇ 11 ರವರೆಗೆ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ರಾಯಭಾರಿಯಾಗಿರುವ ವಿದ್ಯಾಬಾಲನ್ ಮಾತನಾಡಿ, ಆಸ್ಕರ್ ಪ್ರಶಸ್ತಿ ಪಡೆಯುವ ಬಗ್ಗೆ ನಾನು ಯೋಚಿಸಿಲ್ಲ. ಆದರೆ, ದೇವರು ಸದಾ ನನ್ನ ಪರವಾಗಿದ್ದರಿಂದ ಖಂಡಿತವಾಗಿ ಆಸ್ಕರ್ ಪ್ರಶಸ್ತಿ ಪಡೆಯುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

PR
ಇತ್ತೀಚೆಗೆ ಬಿಡುಗಡೆಯಾದ ಶಾದಿ ಕೆ ಸೈಡ್ ಎಫೆಕ್ಟ್ಸ್‌ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಸಂತಸ ತಂದಿದೆ. ಜನತೆ ಉತ್ತಮ ಚಿತ್ರಗಳಿಗೆ ಮನ್ನಣೆ ನೀಡುತ್ತಾರೆ ಎನ್ನುವ ಭರವಸೆಯಿದೆ ಎಂದು ತಿಳಿಸಿದ್ದಾರೆ.

PR
ಬಾಲಿವುಡ್ ಚಿತ್ರಗಳಲ್ಲಿನ ನಟನೆಯ ಬಗ್ಗೆ ಅಭಿಮಾನಿಗಳು ತೋರುತ್ತಿರುವ ಸಂತಸ ಮತ್ತು ಹೊಗಳಿಕೆಯಿಂದ ನಾನು ಸಂಪೂರ್ಣ ತೃಪ್ತಳಾಗಿದ್ದೇನೆ. ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸುವತ್ತ ಗಮನಹರಿಸುವುದಾಗಿ ಹೇಳಿದ್ದಾರೆ.

PR
ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷವನ್ನು ಪ್ರವೇಶಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿದ್ಯಾಬಾಲನ್, ಸದ್ಯಕ್ಕೆ ಅಂತಹ ಯಾವುದೇ ಚಿಂತನೆ ನನ್ನ ಬಳಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ