ರಜನಿಕಾಂತ್ ಅವರ ನಟನೆಯನ್ನು ತಮಾಷೆ ಮಾಡಿದ ಮಣಿರತ್ನಂ ... ಯಾವಾಗ ಗೊತ್ತೇ ?

ಗುರುವಾರ, 17 ಏಪ್ರಿಲ್ 2014 (09:25 IST)
PR
ಕಾಲಿವುಡ್ ಸೂಪರ್ ಸ್ಟಾರ್ ಹಾಗು ಭಾರತೀಯ ವಿಶಿಷ್ಟ ನಟ ರಜನಿಕಾಂತ್ ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಯಾಕೆ ಅಂದ್ರೆ ಅವರು ನಟಿಸುವ ಶೈಲಿ ವಿಧಾನವನ್ನು ಯಾರೂ ಅಲ್ಲಗಳೆದೆ ಇಲ್ಲ. ಅದರಲ್ಲೂ ಸಾಮಾನ್ಯರ ವಿಷಯ ಪಕ್ಕಕ್ಕೆ ಇಡಿ ಯಾವ ನಿರ್ದೇಶಕರು ಸಹಿತ ಅವರ ಬಗ್ಗೆ ಒಂದು ಮಾತಾಡಿಲ್ಲ ಅಷ್ಟೊಂದು ಪ್ರತಿಭಾವಂತ ನಟ ಅವರು.

ಆದರೆ ಕಾಲಿವುಡ್ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ಮಾತ್ರ ರಜನಿಗೆ ನಟಿಸೋಕೆ ಬರಲ್ಲ ಎನ್ನುವ ಮಾತು ಹೇಳಿದ್ದಾರಂತೆ. ಇದನ್ನು ಸ್ವಯಂ ರಜನಿಕಾಂತ್ ಅವರೇ ಹೇಳಿದ್ದಾರೆ. ಇತ್ತೀಚೆಗೆ ನಡೆದ ತಮಿಳು ಹೊಸವರ್ಷದ ಆಚರಣೆಯ ಸಮಯದಲ್ಲಿ ಈ ಸಂಗತಿಯನ್ನು ಖುದ್ದು ರಜನಿಕಾಂತ್ ಚಾನೆಲ್ ಒಂದರಲ್ಲಿ ನಡೆದ ಸಂದರ್ಶನದ ಸಮಯದಲ್ಲಿ ಹೇಳಿದರು.

ನೀವು ನಿಮ್ಮ ತಾರ ಬದುಕಲ್ಲಿ ಅತಿ ಹೆಚ್ಚು ಕಷ್ಟ ಪಟ್ಟ ಸಿನಿಮಾ ಕೊಚ್ಚಾಡಿಯನ್ ಎನ್ನುವುದು ಹಲವರ ಅಭಿಪ್ರಾಯ. ಅದು ಅಲ್ಲದೆ ಹೋದರೆ ಯಾವುದು?ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ ರಜನಿ ಉತ್ತರಿಸುತ್ತಾ..ತಾನು ಅತ್ಯಂತ ಕಷ್ಟಪಟ್ಟು ಮಾಡಿದ ಚಿತ್ರ ದಳಪತಿ ಎಂದು ಹೇಳಿದರು.

PR
ಆ ಸಿನಿಮಾದಲ್ಲಿ ಸೂಪರ್ ಸ್ಟಾರ್ ಇಮೇಜ್ ನಲ್ಲಿ ಇರುವ ಸೂರ್ಯ ಪಾತ್ರದಲ್ಲಿ ನನ್ನನ್ನು ತೋರಿಸಲು ಮಣಿರತ್ನಂ ಅವರು ಸಾಕಷ್ಟು ಕಷ್ಟ ಪಟ್ಟಿದ್ದರು. ಆ ಸಿನಿಮಾದಲ್ಲಿ ನಟಿಸುವಾಗ ಕೆಲವು ಸನ್ನಿವೇಶಗಳಲ್ಲಿ ತನ್ನ ಮುಖದಲ್ಲಿ ಭಾವನೆಗಳನ್ನು ತೋರ ಬೇಕಿತ್ತು. ಆಗ ಅನೇಕ ಬಾರಿ ಆರೀತಿ ಸಾಧ್ಯ ಆಗುತ್ತಿರಲಿಲ್ಲ.

ಅಂತಹ ಸಮಯದಲ್ಲಿ ಮಣಿರತ್ನಂ ಅವರು ನೀವು ನೂರು ಚಿತ್ರಗಳನ್ನು ಮಾಡಿದ ಸೂಪರ್ ಸ್ಟಾರಾ ಅಂತ ಆಶ್ಚರ್ಯ ಆಗುತ್ತಿದೆ ಎಂದು ನಗುತ್ತಿದ್ದರು. ಇದನ್ನು ಕಂಡು ನನಗೆ ಸಾಕಷ್ಟು ಚಿಂತೆ ಆಗುತ್ತಿತ್ತು. ತನ್ನ ನಟನೆಯ ಬಗ್ಗೆ ಕಮೆಂಟ್ ಮಾಡಿದ್ದು ತನ್ನ ಗುರು ಬಾಲಚಂದರ್.

ಅವರ ನಂತರ ಮಣಿರತ್ನಂ ಅವರು. ತನ್ನ ಗುರು ಹಿಂದೆ ನಟಿಸುವಾಗ ಸರಿಯಾಗಿ ನಟಿಸದೆ ಹೋದಾಗ ಕಮಲ್ ಹಾಸನ್ ಹತ್ರ ನಟಿಸುವುದನ್ನು ಕಲಿತುಕೋ ಎಂದು ಛೇಡಿಸುತ್ತಿದ್ದರು ಎನ್ನುವ ಸಂಗತಿ ಬಯಲು ಮಾಡಿ ಇಡಿ ಕಾಲಿವುಡ್ ನ್ನು ಆಶ್ಚರ್ಯ ಚಕಿತ ಮಾಡಿದ್ದರು ಅಂದು ರಜನಿ.

ವೆಬ್ದುನಿಯಾವನ್ನು ಓದಿ