ಮಹಿಳೆಯರು ಲೈಂಗಿಕ ದೌರ್ಜನ್ಯದಿಂದ ಪಾರಾಗಲು ರಾಖಿ ಸಾವಂತ್ ನೀಡಿದ ಹೊಸ ಉಪಾಯವೇನು ಗೊತ್ತಾ?

ಬುಧವಾರ, 31 ಅಕ್ಟೋಬರ್ 2018 (07:19 IST)
ಮುಂಬೈ : ಬಾಲಿವುಡ್ ನ ಹಾಟ್ ನಟಿ ರಾಖಿ ಸಾವಂತ್ ಇದೀಗ ಮಹಿಳೆಯರು ತಮ್ಮ ಮಾನ ರಕ್ಷಣೆಗಾಗಿ ಏನು ಮಾಡಬೇಕೆಂಬ ಸಲಹೆ ನೀಡಿದ್ದಾರೆ.


ಇತ್ತೀಚೆಗಷ್ಟೇ ತನುಶ್ರೀ ದತ್ತಾ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ ಎಂದು ಆರೋಪಿಸಿದ್ದ ನಟಿ ರಾಖಿಸಾವಂತ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿ ಅದರಲ್ಲಿ ತಾನು ವಿಜ್ಞಾನಿ ಎಂದು ಹೇಳಿಕೊಂಡು ಹೆಣ್ಣುಮಕ್ಕಳು  ಲೈಂಗಿಕ ದೌರ್ಜನ್ಯದಿಂದ ಪಾರಾಗಲು ತಾನು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
ಅದರಂತೆ ಹೆಣ್ಣು ಮಕ್ಕಳು ಹೊರಹೋಗುವಾಗ ಮಾನ ರಕ್ಷಣೆಗಾಗಿ ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ