ಭಾರತದತ್ತ ಶ್ರೀದೇವಿ ಅಂತಿಮ ಪಯಣ

ಮಂಗಳವಾರ, 27 ಫೆಬ್ರವರಿ 2018 (17:00 IST)
ಮುಂಬೈ: ಶನಿವಾರ ಸಂಜೆ ದುಬೈನಲ್ಲಿ ಸಾವನ್ನಪ್ಪಿದ ಬಾಲಿವುಡ್ ತಾರೆ ಶ್ರೀದೇವಿ ಮೃತದೇಹ ಎಲ್ಲಾ ಔಪಚಾರಿಕತೆಗಳನ್ನು ಪೂರೈಸಿ ಭಾರತದತ್ತ ಪ್ರಯಾಣ ಬೆಳೆಸಿದೆ.
 

ಮೋಹಕ ತಾರೆಯ ಅಂತಿಮ ಯಾತ್ರೆ ಕೊನೆಗೂ ಭಾರತದತ್ತ ಆರಂಭವಾಗಿದೆ. ಈಗಾಗಲೇ ದುಬೈ ಏರ್ ಪೋರ್ಟ್ ಗೆ ಶ್ರೀದೇವಿ ಮೃತದೇಹವನ್ನು ಹೊತ್ತ ಆಂಬ್ಯುಲೆನ್ಸ್ ಕರೆತಂದಿದ್ದು,  ಜೆಟ್ ವಿಮಾನ ಮೂಲಕ ಮುಂಬೈಗೆ ಬಂದಿಳಿಯಲಿದೆ.

ರಾತ್ರಿ 10 ಗಂಟೆ ಸುಮಾರಿಗೆ ಮುಂಬೈಗೆ ವಿಮಾನ ಬಂದಿಳಿಯುವ ನಿರೀಕ್ಷೆಯಿದೆ. ದುಬೈ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ಸಹಜ ಸಾವು ಎಂದು ಘೋಷಿಸಿದ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು. ನಾಳೆ ಬಾಲಿವುಡ್ ತಾರೆಯ ಅಂತಿಮ ವಿಧಿ ವಿಧಾನಗಳು ನಡೆಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ