ತೆಲಗು ನಟ ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಅಭಿಮಾನಿಯೊಬ್ಬರನ್ನು ಭೇಟಿ ಮಾಡಲು ಬರುತ್ತಿದ್ದಾರೆ. ತಮ್ಮ ವೈಯಕ್ತಿಕ ಕಾರಣಕ್ಕಾಗಿ ಹಾಗೂ ಯಾವುದೇ ಚಿತ್ರದ ಕಾರ್ಯಕ್ಕಾಗಿ ಅವರು ಬೆಂಗಳೂರಿಗೆ ಬರುತ್ತಿಲ್ಲ. ಅದರ ಬದಲು ಅಭಿಮಾನಿಯೊಬ್ಬರ ಕನಸನ್ನು ಈಡೇರಿಸಲು ಗಾರ್ಡನ್ ಸಿಟಿಗೆ ಎಂಟಿಆರ್ ಆಗಮಿಸಲಿದ್ದಾರೆ.
ನಾಗಾರ್ಜುನ್ ಎಂಬಾತರು ಜೂನಿಯರ್ ಎನ್ಟಿಆರ್ ಫ್ಯಾನ್... ನಾಗಾರ್ಜುನ ಎನ್ನುವ ಅಭಿಮಾನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಟ ಎಂಟಿಆರ್ನ ಕಟ್ಟಾ ಅಭಿಮಾನಿಯಂತೆ. ಆದ ಕಾರಣ ನಾಗಾರ್ಜುನಗಾಗಿ ಕೆಲ ಸಮಯ ಮೀಸಲಿಡಲು ಬೆಂಗಳೂರಿಗೆ ಬರಲು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ಜೂನಿಯರ್ ಎನ್ಟಿಆರ್ ದೊಡ್ಡ ಹೃದಯವಿರುವ ನಟ, ಅಭಿಮಾನಿಯ ಆಸೆಯನ್ನು ಪೂರೈಸಲು ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ ಕುಟುಂಬದವರಿಗೆ ಧೈರ್ಯ ನೀಡಲು ಎನ್ಟಿಆರ್ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ