ಕ್ರೀಡಾಪಟುಗಳಿಗೆ ಕೇವಲ ಪದಕವಷ್ಟೇ ಸಾಲದು,ಹಣವು ಬೇಕು :ನಟ ಅಕ್ಷಯ ಕುಮಾರ್

ಮಂಗಳವಾರ, 16 ಆಗಸ್ಟ್ 2016 (16:32 IST)
ಒಲಿಂಪಿಕ್ಸ್ ಅಂಥ ಕ್ರೀಡಾಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕೇವಲ ಪದಕವಷ್ಟೇ ದೊರೆತರೇ ಸಾಲದು, ಅದರ ಜತೆಗೆ ಹಣವು ದೊರೆಯಬೇಕು ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ ಕುಮಾರ್ ತಿಳಿಸಿದ್ದಾರೆ. ಪ್ರಮಾಣ ಪತ್ರ, ಪದಕ ಪಡೆಯುವುದು ದೊಡ್ಡ ಸಾಧನೆ ಎಂದು ಹೇಳಲಾಗುತ್ತದೆ. ಆದ್ರೆ ಅದರ ಜತೆಗೆ ಹಣಕಾಸಿನ ಬಹುಮಾನ ದೊರೆಯಬೇಕು ಎಂದು ಹೇಳಿದರು. 
ನಾನು ಬಹಳ ಕ್ರಿಡಾಪಟುಗಳನ್ನು ನೋಡಿದ್ದೇನೆ ಪದಕ ಮಾರಾಟ ಮಾಡಿ ಹಣ ತೆಗೆದುಕೊಳ್ಳುತ್ತಾರೆ. ನೀವು ಸಹ ಇಂಥ ಹಲವು ಕಥೆಗಳನ್ನು ಕೇಳಿರಬಹುದು. ನೀವು ಯಾರನ್ನಾದರೂ ಪುರಸ್ಕಾರ ನೀಡಿದ್ರೆ ಕೇವಲ ಪದಕ ಅಷ್ಟೇ ನೀಡದಿರಿ, ಅದರ ಜತೆಗೆ ಹಣ ಸಹ ನೀಡಿ ಎಂದು ತಿಳಿಸಿದರು. 

ಇನ್ನೂ ಅಕ್ಕಿ ಅಭಿನಯದ ರುಸ್ತುಮ್ ಚಿತ್ರ ಕಳೆದ ಶುಕ್ರವಾರ ತೆರೆ ಕಂಡು ಭರ್ಜರಿಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ರುಸ್ತುಮ್ ಚಿತ್ರದಲ್ಲಿ ಅಕ್ಷಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಅವತಾರದಲ್ಲಿ ಅಕ್ಕಿ ಚುರುಕಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಪೋಸ್ಟರ್‌ನಲ್ಲಿ ಅವರು ಸಖತ್ ಹ್ಯಾಂಡ್‌ಸಮ್ ಆಗೇ ಕಾಣಿಸಿಕೊಂಡಿದ್ದರು.

ರುಸ್ತುಮ್' ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದಾರೆ. ಇಲಿಯಾನಾ ಡಿಯೋಜಾ, ಇಶಾ ಗುಪ್ತಾ ಈ ಚಿತ್ರದಲ್ಲಿ ಮುಂತಾದವರು ಕಾಣಿಸಿಕೊಂಡಿದ್ದಾರೆ. 'ರುಸ್ತುಮ್' ಚಿತ್ರಕ್ಕಾಗಿ ಈ ಹಿಂದೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ರಜನಿಕಾಂತ್, ರಣಬೀರ್ ಸಿಂಗ್ ಹಾಗೇ ಸೋನಮ್ ಕಪೂರ್ ಮೊದಲಾದವರು ಚಿತ್ರದ ಪ್ರಚಾರ ಮಾಡಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ