1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ನಡೆಯುವಾಗ ಸಲ್ಮಾನ್ ಜೋಧ್ಪುರದ ಬಳಿ ಇರುವ ರಕ್ಷಿತಾರಣ್ಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಅವರ ವಿರುದ್ಧ ಕೃಷ್ಣಮೃಗ ಬೇಟೆ, ಪರವಾನಿಗೆ ಮುಗಿದ ಬಳಿಕವೂ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಸೇರಿದಂತೆ ಮೂರು ಪ್ರಕರಣ ದಾಖಲಾಗಿತ್ತು .
ಮತ್ತಿಂದು ಈ ಕುರಿತು ಅಂತಿಮ ತೀರ್ಪು ಪ್ರಕಟವಾಗಲಿದ್ದು ಖುದ್ದು ಹಾಜರಾಗುವಂತೆ ಸಲ್ಮಾನ್ ಮತ್ತು ಕೃತ್ಯ ನಡೆದಾಗ ಅವರ ಜತೆಗಿದ್ದಸೈಫ್ ಅಲಿ ಖಾನ್, ನೀಲಂ, ಟಬು, ಸೋನಾಲಿ ಬೇಂದ್ರೆಗೆ ಸೂಚನೆ ನೀಡಿದೆ.