ಸಲ್ಮಾನ್ ಖಾನ್ ಗೆ ಜೋಧ್ಪುರ ಕೋರ್ಟ್ ನಿಂದ ಸಿಕ್ಕಿದೆ ಒಂದು ಬ್ಯಾಡ್ ನ್ಯೂಸ್

ಭಾನುವಾರ, 5 ಆಗಸ್ಟ್ 2018 (06:58 IST)
ಜೋಧ್ಪುರ : ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇದೀಗ ಜೋಧ್ಪುರ ಕೋರ್ಟ್ ಶಾಕಿಂಗ್ ವಿಚಾರವೊಂದನ್ನು ಹೇಳಿದೆ.


ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಟ ಸಲ್ಮಾನ್ ಖಾನ್ ಅವರಿಗೆ ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಆದರೆ ಜಾಮೀನಿನ ಮೂಲಕ ಹೊರಗೆಬಂದ ಸಲ್ಮಾನ್ ಖಾನ್ ಅವರು ವಿದೇಶ ಪ್ರವಾಸದ ಮೇಲಿರುವ ಷರತ್ತಿನಲ್ಲಿ ವಿನಾಯತಿ ನೀಡುವಂತೆ ಜೋಧ್ ಪುರ ಕೋರ್ಟ್ ಮೊರೆ ಹೋಗಿದ್ದರು.


ಆದರೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಲ್ಮಾನ್ ಖಾನ್ ವಕೀಲರ ಮನವಿಗೆ ಮನ್ನಣೆ ನೀಡದೆ, ಯಾವುದೇ ಕಾರಣಕ್ಕೂ ವಿನಾಯಿತಿ ನೀಡುವುದಿಲ್ಲ ಎಂದು  ಖಡಕ್ ಆಗಿ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ