ಶಿವಲಿಂಗಕ್ಕೆ ವಿಸ್ಕಿ, ಅಗರಬತ್ತಿ ಬದಲು ಸಿಗರೇಟ್

ಶುಕ್ರವಾರ, 20 ಜನವರಿ 2017 (08:59 IST)
ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗು ಚಿತ್ರವೊಂದರಲ್ಲಿ ಶಿವಲಿಂಗಕ್ಕೆ ಸರಾಯಿ ಕುಡಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರನ್ನು ಬಂಧಿಸಲಾಗಿದೆ.

ಹೊಸ ಕಲಾವಿದರು ಅಭಿನಯಿಸಿರುವ ಚಿತ್ರ ದೇವುಡದಲ್ಲಿ ಶಿವಲಿಂಗಕ್ಕೆ ಮದ್ಯ ಕುಡಿಸುವ ದೃಶ್ಯಗಳಿವೆ. ಜತೆಗೆ ಅಗರಬತ್ತಿ ಬದಲು ಲಿಂಗದ ಮುಂದೆ ಸಿಗರೇಟ್ ಹೊತ್ತಿಸಿ ಇಡಲಾಗಿರುವ ದೃಶ್ಯಗಳು ಚಿತ್ರದಲ್ಲಿವೆ. ಈ ಮೂಲಕ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. 
 
ಪ್ರಕರಣ ದಾಖಲಿಸಿಕೊಂಡಿದ್ದ ತೆಲಂಗಾಣ ಪೊಲೀಸರು ತೆನಾಲಿ ಮೂಲದ ನಿರ್ದೇಶಕ ದಾಸರಿ ಸಾಯಿರಾಮ್ ಮತ್ತು ಕಡಪಾ ಮೂಲದ ನಿರ್ಮಾಪಕ ಗೆಜ್ಜೆಲ ಹರಿಕುಮಾರ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ,
 
ಇಬ್ಬರು ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ