ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರಲ್ಲಿ ಯಾವ ಸೀರೆಗಾಗಿ ಬೇಡಿಕೆ ಇಟ್ಟಿದ್ದು…?

ಸೋಮವಾರ, 26 ಮಾರ್ಚ್ 2018 (06:18 IST)
ಮುಂಬೈ : ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಫೇಮಸ್ ಆಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಇನ್ನಷ್ಟು ಹೆಸರು ತಂದ ಕೊಟ್ಟ ಸಿನಿಮಾ ‘ಪದ್ಮಾವತ್’. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ  ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ವಿರೋಧಗಳ ನಡುವೆ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ನೀಡಿತ್ತು.

ಈ ಚಿತ್ರದಲ್ಲಿ ದೀಪಿಕಾ ಅವರು ಚಿತ್ತೋರ್ ರಾಣೆ ಪದ್ಮಾವತಿ ಪಾತ್ರದಲ್ಲಿ ನಟಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತನಗೆ ಎದುರಾಗಿದ್ದ ಅಡೆತಡೆಗಳನ್ನು ದಾಟಿ 'ಪದ್ಮಾವತ್‌' ಚಿತ್ರ 300 ಕೋಟಿಗಳಿಂತ ಹೆಚ್ಚು ಹಣ ಗಳಿಸಿತ್ತು. ಈ ಚಿತ್ರದಲ್ಲಿ ಕೊನೆಯ ಜೋಹಾರ್‌‌ ಸೀನ್‌ ಭಾವನಾತ್ಮಕತೆಯಿಂದ ಕೂಡಿದ್ದು, ಚಿತ್ರದ ಯಶಸ್ಸಿಗೆ ಈ ಸೀನ್ ಹೆಚ್ಚು ಕಾರಣವಾಗಿತ್ತು ಎಂದೇ ಹೇಳಬಹುದು.

 

ಇದೀಗ ನಟಿ ದೀಪಿಕಾ ಅವರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಲ್ಲಿ ಒಂದು ಬೇಡಿಕೆಯಿಟ್ಟಿದ್ದಾರೆ. ಅದೇನೆಂದರೆ ಜೋಹಾರ್ ಸೀನ್‌ನಲ್ಲಿ ತಾವು ಧರಿಸಿದ್ದ ಸೀರೆಯನ್ನು ತಮಗೆ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಬನ್ಸಾಲಿ ಅವರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ