ತೆಲುಗು ಕಾಮಿಡಿ ಕಾರ್ಯಕ್ರಮದ ಹೈಪರ್ ಆದಿಗೆ ಶ್ರೀರೆಡ್ಡಿ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ಯಾಕೆ?

ಗುರುವಾರ, 31 ಮೇ 2018 (07:18 IST)
ಹೈದರಾಬಾದ್ : ಈ ಟಿವಿ ತೆಲುಗು ಖಾಸಗಿ ವಾಹಿನಿಯಲ್ಲಿ ಪ್ರತಿ ವಾರ ಪ್ರಸಾರವಾಗುವ 'ಜಬರ್ದಸ್ಥ್' ಕಾಮಿಡಿ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಿ ಫೆಮಸ್ ಆಗಿರುವ ಕಲಾವಿದ ಹೈಪರ್ ಆದಿ ಅವರಿಗೆ ತೆಲುಗು ನಟಿ ಶ್ರೀರೆಡ್ಡಿ ಅವರು ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರಂತೆ.


'ಜಬರ್ದಸ್ಥ್' ಕಾಮಿಡಿ ಕಾರ್ಯಕ್ರಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಹೈಪರ್ ಆದಿ ಅವರು ತಾವು ನೀಡಿರುವ ಇತ್ತೀಚಿನ ಸ್ಕಿಟ್ ನಲ್ಲಿ ನಟಿ ಶ್ರೀರೆಡ್ಡಿ ಅರೆ ನಗ್ನದ ಹೋರಾಟದ ಕುರಿತಾಗಿ ಪಾರ್ನ್ ಸ್ಟಾರ್ ಗೆ ಹೋಲಿಸಿದ್ದಾರಂತೆ. ಇದರಿಂದ ಕೋಪಗೊಂಡ ನಟಿ ಶ್ರೀರೆಡ್ಡಿ ಅವರು ತನ್ನ ಬಗ್ಗೆ ಈ ರೀತಿಯ ಸ್ಕಿಟ್ ಮಾಡಿರುವ ಹೈಪರ್ ಆದಿಯನ್ನು ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಸ್ಟ್ರಾಂಗ್ ಆಗಿ ವಾರ್ನ್ ಮಾಡಿದ್ದಾರಂತೆ.


ಹಾಗೇ ‘ಹೈಪರ್ ಆದಿಯ ಟ್ಯಾಲೆಂಟ್ ಅನ್ನು ನಾನು ಇಷ್ಟಪಡುತ್ತೇನೆ ಹಾಗು ಗೌರವಿಸುತ್ತೇನೆ ಅವರ ಕಷ್ಟದ ಜೀವನದಿಂದ ಈ ಮಟ್ಟಕ್ಕೆ ಬಂದು ನನ್ನ ಕುರಿತಾಗಿ ಈ ರೀತಿಯ ಹೇಳಿಕೆಯನ್ನು ನೀಡುವ ಸ್ಕಿಟ್ ಮಾಡಿರುವುದು ನಾನು ಖಂಡಿಸುತ್ತೇನೆ’ ಎಂದು ಕೂಡ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ