ಶನಿ ಹೇಗಲೇರಿ ಕುಳಿತರೆ .. ಯಾವ ರಾಶಿಯವರಿಗೆ ಎಷ್ಟೆಷ್ಟು ಪರಿಣಾಮ
ಮಂಗಳವಾರ, 25 ಫೆಬ್ರವರಿ 2014 (11:53 IST)
PR
ಮೇಷ: ಮೇಷ ರಾಶಿಗೆ ಈಗ ಶನಿ ಸ್ವಾಸ್ಥ್ಯ ನೀಡುತ್ತಾನೆ. ಅಷ್ಟೇ ಅಲ್ಲ, ಧನಲಾಭವನ್ನೂ ಕೂಡಾ. ಆದರೆ ಚಿಂತೆಯನ್ನೂ ಇದೇ ಲಾಭಕಾರಕ ಶನಿ ಈ ರಾಶಿಯವರಿಗೆ ನೀಡುತ್ತಾನೆ. ಕುಟುಂಬ, ಸಂತಾನ ಹಾಗೂ ವ್ಯಾಪಾರ, ನೌಕರಿ ಸಂಬಂಧ ಚಿಂತೆ ಹೆಚ್ಚುತ್ತದೆ.
ವೃಷಭ: ಸಮಸ್ಯೆಗಳಿಂದ ಮುಕ್ತಿ ದೊರೆತರೂ, ಸ್ತ್ರೀ ಪುತ್ರರ ಸ್ವಾಸ್ಥ್ಯಕ್ಕೆ ಕಷ್ಟ ಸಾಧ್ಯತೆಗಳಿವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭವೂ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ.
ಮಿಥುನ: ಈ ರಾಶಿಯವರಿಗೆ ಈಗ ಶನಿ ತುಂಬ ಪೀಡಾಕಾರಕನಾಗಿರುತ್ತಾನೆ. ಕುಟುಂಬ ಕಲಹ, ಸಹೋದರರೊಂದಿಗೆ ಮನಸ್ತಾಪ, ಪ್ರವಾಸದಿಂದ ಕಷ್ಟ, ಚಿಂತೆ ಇವೆಲ್ಲ ತೊಂದರೆಗಳು ಸಂಭವಿಸುತ್ತದೆ. ವೃತ್ತಿ ಜೀವನದಲ್ಲೂ ಈ ರಾಶಿಯವರು ತುಂಬ ಜಾಗರೂಕರಾಗಿರಬೇಕು.
ಕರ್ಕ: ಈ ರಾಶಿಯವರಿಗೆ ಉತ್ತಮ ಸಮಯ. ಪರಾಕ್ರಮ ವೃದ್ಧಿ, ಶತ್ರು ವಿಜಯ, ಧನಲಾಭ, ಉದ್ಯೋಗದಲ್ಲಿ ಬಡ್ತಿ ಅಥವಾ ಸ್ಥಾನಾಂತರ (ಟ್ರಾನ್ಸ್ಫರ್) ಸಾಧ್ಯತೆಗಳನ್ನು ಶನಿ ತರುತ್ತಾನೆ. ಆದರೆ ನಿಮಗೆ ಶನಿ ಶುಭಕಾರಕನು.
ಸಿಂಹ: ತುಂಬ ಕಷ್ಟನಷ್ಟಗಳಿದ್ದರೂ ಧನಲಾಭದ ಯೋಗವಿದೆ. ಸಣ್ಣ ಪುಟ್ಟ ಗಾಯಗಳಾಗುವ, ಅಫಘಾತಗಳಾಗುವ ಭಯವಿದೆ. ಹಾಗಾಗಿ ಜಾಗ್ರತೆ ಅಗತ್ಯ. ನೌಕರಿಯ್ಲಲೂ ಕಷ್ಟನಷ್ಟಗಳ ಸಾಧ್ಯತೆಯಿದೆ. ಯಾವುದಾದರೂ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ.
ಕನ್ಯಾ: ಆಲಸ್ಯ, ಮಾನಸಿಕ ಚಿಂತೆ ಈ ರಾಶಿಯವರಿಗೆ ಈಗ ಸಾಮಾನ್ಯ. ಧನಹಾನಿಯಾಗುವ ಸಂಭವವಿದೆ. ತುಂಬ ವಾದ ವಿವಾದಗಳಲ್ಲಿ ತೊಡಗಿ ಮಾನಸಿಕ ಚಿಂತೆ ಹುಟ್ಟುತ್ತದೆ. ಈ ರಾಶಿಯವರು ಈಗ ತುಂಬ ಸಾವಧಾನಿಗಳಾಗಿ ಸಮಾಧಾನ ಚಿತ್ತರಾಗಿರುವುದು ಉತ್ತಮ.
ತುಲಾ: ತುಲಾರಾಶಿಗೆ ಈಗ ಸಾಡೇಸಾತಿ (ಏಳುವರೆ) ಶನಿ ದೆಶೆ ಆರಂಭ. ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದವರ ಶ್ರಮ, ಕಷ್ಟಗಳು ಹೆಚ್ಚುತ್ತವೆ. ಆದರೆ ವಾಹನ ಯೋಗ, ಧನಲಾಭ ಮುಂತಾದ ಸುಖಭೋಗಗಳಿಗೆ ಕೊರತೆಯಿರುವುದಿಲ್ಲ.
ವೃಶ್ಚಿಕ: ಈ ರಾಶಿಯವರಿಗೆ ಈಗ ಉತ್ತಮ ಸಮಯ. ಮಾನ, ಸಮ್ಮಾನ, ಪ್ರತಿಷ್ಠೆ ಹೆಚ್ಚುತ್ತದೆ. ಧನಲಾಭವೂ ಕೂಡಾ ಇದೆ. ವಾಹನ, ಯಂತ್ರಗಳಿಂದ ಲಾಭವಿದೆ. ಮಾನಸಿಕ ಕಷ್ಟನಷ್ಟಗಳೆಲ್ಲ ದೂರವಾಗುತ್ತದೆ.
ಧನು: ಧನಲಾಭ, ಆರ್ಥಿಕ ಅನುಕೂಲತೆಗಳಿದ್ದರೂ ಖರ್ಚೂ ಹೆಚ್ಚುತ್ತದೆ. ಶ್ರಮ ಹೆಚ್ಚಿದರೂ, ಸ್ತಾನಪಲ್ಲಟವಾಗುವ ಸಾಧ್ಯತೆಯಿದೆ. ಉದರ ಸಂಬಂಧೀ ರೋಗಗಳ ಭಯವಿರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮಕರ: ಚಿಂತೆ ನಿಮಗೀಗ ಸಾಮಾನ್ಯ. ಕಾರ್ಯ ಸಫಲತೆಗೆ ತುಂಬ ಶ್ರಮ ಪಡಬೇಕಾಗುತ್ತದೆ. ಶಾರೀರಿಕ ಶ್ರಮ ಹೆಚ್ಚುತ್ತದೆ. ವಾಹನ ಚಲಾಯಿಸುವವರು ತುಂಬ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು.
ಕುಂಭ: ಸ್ವರಾಶಿಯಾಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಶನಿಯಿಂದ ತೊಂದರೆ ಕಡಿಮೆ, ಅನುಕೂಲತೆಗಳೇ ಹೆಚ್ಚು. ಸುಖ ಸಮೃದ್ಧಿ ಹೆಚ್ಚುತ್ತದೆ. ಆದರೂ ಶನಿಯ ಪ್ರಭಾವದಿಂದ ಜೀವನ ಸ್ವಲ್ಪ ಅಸ್ತವ್ಯಸ್ಥವಾಗುವ ಸಂಭವವಿದೆ. ತುಂಬ ರಿಸ್ಕ್ ತೆಗೆದುಕೊಳ್ಳುವುದು ಬೇಡ.
ಕುಂಭಮೀನ: ಮಾನಸಿಕ ಕ್ಲೇಷ ಹಾಗೂ ತುಂಬ ಭಾಗ್ಯದೋಷಗಲಿದ್ದರೂ, ಶನಿ ಿಮಗೆ ಧನಲಾಭ ನೀಡುತ್ತಾನೆ. ವ್ಯರ್ಥ ಚಿಂತೆ ಮಾಡುವುದು ನಿಮಗೆ ಈಗ ಅಗತ್ಯವಿಲ್ಲ. ದೂರ ಪ್ರಯಾಣ ಮಾಡುವ ಸಂಭವವಿದೆ. ಆದರೆ ಹಣ ವ್ಯಯ ಮಾಡುವ ಸಂದರ್ಭ ಯೋಚಿಸಿ, ಲೆಕ್ಕಾಚಾರ ಹಾಕಿ ಖರ್ಚು ಮಾಡುವುದು ಉತ್ತಮ.