ಮುಂಬೈ: ಐಸಿಸಿಯೊಂದಿಗೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಿಕ್ಕಾಟ ನಡೆಸುತ್ತಿರುವ ಬಿಸಿಸಿಐ ಅಗತ್ಯ ಬಿದ್ದರೆ ಎಲ್ಲಾ ಐಸಿಸಿ ಟೂರ್ನಮೆಂಟ್ ಗಳಿಂದ ಹಿಂದಕ್ಕೆ ಸರಿಯಲೂ ಸಿದ್ಧ ಎಂದು ಬೆದರಿಕೆ ಹಾಕಿದೆ.
ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಿಂದ ಹೆಚ್ಚು ಕಡಿಮೆ ವಿಮುಖವಾಗಿದೆ. ಈಗಾಗಲೇ ತಂಡವನ್ನು ಘೋಷಣೆ ಮಾಡದೇ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ. ಆದರೂ ಐಸಿಸಿ ಬಿಸಿಸಿಐ ಆಗ್ರಹಕ್ಕೆ ಒಪ್ಪಿಲ್ಲ.
ಅದರ ಬದಲು ಸ್ವಲ್ಪ ಹೆಚ್ಚು ಲಾಭಾಂಶ ನೀಡಲು ಒಪ್ಪಿದೆ. ಆದರೂ ಅದಕ್ಕೆ ಬಿಸಿಸಿಐ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಐಸಿಸಿ ತನ್ನೆಲ್ಲಾ ಟೂರ್ನಮೆಂಟ್ ಗಳಿಂದ ಬಿಸಿಸಿಐಗೆ ನಿಷೇಧ ಹೇರಿದರೂ ಅಚ್ಚರಿಯಿಲ್ಲ.
ಈ ಹಿನ್ನಲೆಯಲ್ಲಿ ಬಿಸಿಸಿಐ ಯಾವುದೇ ಐಸಿಸಿ ಟೂರ್ನಮೆಂಟ್ ಗಳಿಂದ ಹಿಂದೆ ಸರಿಯಲೂ ತಾವು ಸಿದ್ಧ ಎಂದು ಘೋಷಿಸಿಕೊಂಡಿದೆ. ಏನೇ ಆದರೂ ಇದರಿಂದ ನಷ್ಟವಾಗುತ್ತಿರುವುದು ಭಾರತೀಯ ಅಭಿಮಾನಿಗಳಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ