ಶ್ರೀಲಂಕಾ ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ? ರೋಹಿತ್ ಕತೆಯೇನು?

ಮಂಗಳವಾರ, 27 ಡಿಸೆಂಬರ್ 2022 (08:50 IST)
ಮುಂಬೈ: ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಸಂಭವವಿದೆ.

ಇಂದು ಟೀಂ ಇಂಡಿಯಾ ಆಯ್ಕೆ ನಡೆಯುವ ಸಾಧ‍್ಯತೆಯಿದ್ದು, ಹಾರ್ದಿಕ್ ರನ್ನು ಈ ಮೂಲಕ ಕಿರು ಮಾದರಿಯ ಖಾಯಂ ನಾಯಕನಾಗಿಸಲು ಬಿಸಿಸಿಐ ಮೊದಲ ಹೆಜ್ಜೆ ಇಡಲಿದೆ ಎನ್ನಲಾಗಿದೆ.

ಇತ್ತ ರೋಹಿತ್ ಶರ್ಮಾ ಕೂಡಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಒಂದು ವೇಳೆ ಹಾರ್ದಿಕ್ ನಾಯಕನಾಗಿ ರೋಹಿತ್ ಕೇವಲ ಆಟಗಾರನಾಗಿ ತಂಡದಲ್ಲಿರುತ್ತಾರಾ ಅಥವಾ ಅವರಿಗೆ ಟಿ20 ಸರಣಿಗೆ ವಿಶ್ರಾಂತಿ ನೀಡುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ