ಭುವನೇಶ್ವರ್ ಗೆ ಗಾಯ, ಟೀಂ ಇಂಡಿಯಾಗೆ ಆಘಾತ

ಶನಿವಾರ, 14 ಡಿಸೆಂಬರ್ 2019 (09:07 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾಗೆ ಮತ್ತೊಂದು ಆಘಾತ ಸಿಕ್ಕಿದೆ.


ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಆಗಲಿಲ್ಲ. ಇದರ ಬೆನ್ನಲ್ಲೇ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿರುವ ಮತ್ತೊಂದು ಆಘಾತ ಟೀಂ ಇಂಡಿಯಾಗೆ ಎದರಾಗಿದೆ.

ಇದರಿಂದಾಗಿ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಭುವಿ ಹೊರಬಿದ್ದಿದ್ದಾರೆ. ಸೀಮಿತ ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸುವ ಭುವನೇಶ್ವರ್ ಹೊರಬಿದ್ದಿರುವುದು ತಂಡಕ್ಕೆ ಹೊಡೆತ ನೀಡಲಿದೆ. ಇವರ ಸ್ಥಾನಕ್ಕೆ ಯುವ ವೇಗಿ ಶ್ರಾದ್ಧೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ