ಮುಂಬೈ ಕಾಲ್ತುಳಿತದಲ್ಲಿ ಮಡಿದವರಿಗೆ ಕ್ರಿಕೆಟಿಗರ ಕಂಬನಿ

ಶನಿವಾರ, 30 ಸೆಪ್ಟಂಬರ್ 2017 (08:05 IST)
ಮುಂಬೈ: ಮುಂಬೈ ರೈಲ್ವೇ ಸೇತುವೆಯಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಮೃತರಾದವರಿಗೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.


ತಮ್ಮ ಟ್ವಿಟರ್ ಪೇಜ್ ನಲ್ಲಿ ಘಟನೆ ಬಗ್ಗೆ ಮರುಕ ವ್ಯಕ್ತಪಡಿಸಿರುವ ಸೆಹ್ವಾಗ್ ‘ಮನುಷ್ಯ ಜೀವನ ಎನ್ನುವುದು ದುರದೃಷ್ಟವಶಾತ್ ಬೆಲೆಯೇ ಇಲ್ಲದ ಸಂಗತಿಯಾಗಿದೆ. ತೆರಿಗೆ ಕಟ್ಟಿದ ಮೇಲೂ ಅಮಾಯಕರು ಈ ರೀತಿ ಬಲಿಯಾಗುತ್ತಿರುವುದು ದುರದೃಷ್ಟಕರ’ ಎಂದು ಸೆಹ್ವಾಗ್ ಹೇಳಿದ್ದಾರೆ.

ರೋಹಿತ್ ಶರ್ಮಾ, ವಿವಿಎಸ್ ಲಕ್ಷ್ಮಣ್,  ಮೊಹಮ್ಮದ್ ಕೈಫ್ ಮುಂತಾದವರೂ ಇದೊಂದು ದುರದೃಷ್ಟಕರ ಘಟನೆ ಎಂದು ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ