ಐಸಿಸಿ ಕ್ರಿಕೆಟ್ ನೋಡಿಕೊಂಡರೆ ಸಾಕು ಧೋನಿ ವಿವಾದದ ಬಗ್ಗೆ ಸಂಸದ, ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆ

ಭಾನುವಾರ, 9 ಜೂನ್ 2019 (09:05 IST)
ನವದೆಹಲಿ: ಸೇನಾ ಪಡೆಯ ಚಿಹ್ನೆಯನ್ನು ಗ್ಲೌಸ್ ನಲ್ಲಿ ಬಳಸಿದ್ದಕ್ಕೆ ವಿವಾದಕ್ಕೀಡಾದ ಟೀ ಇಂಡಿಯಾ ವಿಕೆಟ್ ಕೀಪರ್ ಧೋನಿಯ ಪರವಾಗಿ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಮಾತನಾಡಿದ್ದಾರೆ.


ಖಡಕ್ ಮಾತುಗಳಿಗೇ ಹೆಸರಾಗಿರುವ ಗಂಭೀರ್ ಐಸಿಸಿ ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಬಗ್ಗೆ ಯೋಚನೆ ಮಾಡಲಿ. ಅದರ ಬದಲಾಗಿ ಆಟಗಾರರ ಗ್ಲೌಸ್ ನಲ್ಲಿ ಏನಿದೆ, ಯಾವ ಚಿಹ್ನೆ ಇದೆ ಎಂದೆಲ್ಲಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ’ ಎಂದು ಗಂಭೀರ್ ಪ್ರತಿಕ್ರಿಯಿಸಿದ್ದಾರೆ.

‘ವಿಶ್ವಕಪ್ ನಲ್ಲಿ ಬೇಕಾಬಿಟ್ಟಿ ರನ್ ಆಗದಂತೆ ಬೌಲರ್ ಗಳಿಗೂ ನೆರವಾಗುವ ಪಿಚ್ ತಯಾರಿಸುವ ಬಗ್ಗೆ ಐಸಿಸಿ ಚಿಂತೆ ಮಾಡಲಿ. ಅದು ಬಿಟ್ಟು ಇಂತಹ ವಿಚಾರಗಳನ್ನು ಅನಗತ್ಯವಾಗಿ ದೊಡ್ಡದು ಮಾಡಬೇಕಿಲ್ಲ’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ