ನಾ ಸುಮ್ನಿರೋನಲ್ಲ: ಸುರೇಶ್ ರೈನಾ ಎಚ್ಚರಿಕೆ!

ಶುಕ್ರವಾರ, 8 ಸೆಪ್ಟಂಬರ್ 2017 (10:46 IST)
ನವದೆಹಲಿ: ಟೀಂ ಇಂಡಿಯಾಗೆ ಮರಳಲು ಶತಾಯ ಗತಾಯ ಯತ್ನಿಸುತ್ತಿರುವ ಸುರೇಶ್ ರೈನಾ ನಾನು ಸುಮ್ಮನೇ ಕೂತಿಲ್ಲ. ಕಠಿಣ ಪರಿಶ್ರಮ ಪಡುತ್ತಿದ್ದೇನೆ ಎಂದಿದ್ದಾರೆ.


 
ತಂಡಕ್ಕೆ ಮರಳಲು ತನ್ನ ಬ್ಯಾಟಿಂಗ್ ಬಗ್ಗೆ ಹಲವು ದಿಗ್ಗಜರ ಜತೆ ಸಲಹೆ ಪಡೆಯುತ್ತಿದ್ದೇನೆ ಎಂದು ರೈನಾ ಹೇಳಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಿದ ಮೇಲೆ ರೈನಾ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಇದೀಗ ಅವರ ಸ್ಥಾನಕ್ಕೆ ಯುವ ಆಟಗಾರರು ಬಂದಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ರೈನಾ ಸ್ಥಾನಕ್ಕಾಗಿ ಹೆಣಗಾಡುವಂತಾಗಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಾದರೂ ಸ್ಥಾನ ಗಿಟ್ಟಿಕೊಳ್ಳು ಪ್ರಯತ್ನದಲ್ಲಿ ಅವರಿದ್ದಾರೆ.

ಇದನ್ನೂ ಓದಿ.. ವಿಶ್ವವೇ ಮೆಚ್ಚಿದ ವಿರಾಟ್ ಕೊಹ್ಲಿಗೆ ತವರಿನಲ್ಲೇ ಅವಮಾನ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ         

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ