ಮುಂಬೈ ಏರ್ ಪೋರ್ಟ್ ನಿಂದ ಹೊರಬರಲು ಕಷ್ಟಪಟ್ಟ ಮಿಥಾಲಿ ರಾಜ್ ಮತ್ತು ಬಳಗ

ಬುಧವಾರ, 26 ಜುಲೈ 2017 (10:20 IST)
ಮುಂಬೈ: ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರಳುವಾಗ ಭಾರತ ತಂಡ ಹೋಗಿದ್ದೂ ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ಬರುವಾಗ ಹೀರೋಗಳಾಗಿ ಬಂದ ಕ್ರಿಕೆಟ್ ಆಟಗಾರ್ತಿಯರು ತಮ್ಮ ಗಮ್ಯ ತಲುಪಲು ಕಷ್ಟಪಡುವಂತಾಯಿತು.


ಮಹಿಳಾ ಕ್ರಿಕೆಟರುಗಳಾದ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್,  ಜೂಲನ್ ಗೋಸ್ವಾಮಿ, ಪೂನಂ ರಾವತ್, ದೀಪ್ತಿ ಶರ್ಮಾ, ಸ್ಮೃತಿ ಮಂದಣ್ಣ, ಶಿಖಾ ಪಾಂಡೆ, ಸುಷ್ಮಾ ವರ್ಮಾ ಇಂದು ಬೆಳಗಿನ ಜಾವ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಉಳಿದ ಆಟಗಾರ್ತಿಯರು ಇಂದು ಇನ್ನೊಂದು ವಿಮಾನದಲ್ಲಿ ಮುಂಬೈಗೆ ಬಂದಿಳಿಯಲಿದ್ದಾರೆ.

ಬಹುಶಃ ಭಾರತ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಇದುವರೆಗೆ ಮಹಿಳೆಯರಿಗೆ ಇಷ್ಟು ಅದ್ಭುತ ಸ್ವಾಗತ ದೊರಕಿರಲಿಲ್ಲವೇನೋ. ಮಹಿಳಾ ಕ್ರಿಕೆಟರುಗಳು ವಿಮಾನ ಇಳಿಯುತ್ತಿದ್ದರೆ, ನೂರಾರು ಮಂದಿ ಅಭಿಮಾನಿಗಳು ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು. ‘ಇಂಡಿಯಾ ಇಂಡಿಯಾ’ ಎಂದು ಘೋಷಣೆ ಕೂಗಿ ಆಟಗಾರರನ್ನು ಅಭಿಮಾನಿಗಳು ಸ್ವಾಗತಿಸಿದರು.

ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಈ ಹೊಸ ನಾಯಕಿಯರನ್ನು ವಿಮಾನ ನಿಲ್ದಾಣದಿಂದ ಹೊರ ಕಳುಹಿಸಿದರು. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರ ಫೋಟೋ, ಸೆಲ್ಫೀ ತೆಗೆದು ಖುಷಿಪಟ್ಟರು.

ಇದನ್ನೂ ಓದಿ..  ಡೆಂಗ್ಯೂಗೆ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಬಲಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ