ಕೋಚ್ ಆಗುತ್ತಲೇ ಉಲ್ಟಾ ಹೊಡೆದ ರವಿ ಶಾಸ್ತ್ರಿ

ಗುರುವಾರ, 13 ಜುಲೈ 2017 (08:58 IST)
ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ತಮ್ಮ ವರಸೆ ಬದಲಿಸಿದ್ದಾರೆ. ಇಷ್ಟು ದಿನ ಗಂಗೂಲಿ ಜತೆ ಗುದ್ದಾಡಿಕೊಂಡಿದ್ದವರು ಇದೀಗ ಎಲ್ಲಾ ಮರೆತಿದ್ದೇನೆ ಎನ್ನುತ್ತಿದ್ದಾರೆ.


ಕಳೆದ ಬಾರಿ ಕೋಚ್ ಆಯ್ಕೆ ಸಂದರ್ಭದಲ್ಲಿ ತನ್ನನ್ನು ಪರಿಗಣಿಸದೇ ಇರುವುದಕ್ಕೆ ಗಂಗೂಲಿ ಕಾರಣ ಎಂದು ಬಹಿರಂಗವಾಗಿ ಕಿತ್ತಾಡಿಕೊಂಡಿದ್ದ ರವಿಶಾಸ್ತ್ರಿ ಇದೀಗ ಈ ಬಾರಿ ಕೋಚ್ ಆಗಿ ಆಯ್ಕೆಯಾಗುತ್ತಿದ್ದಂತೆ ಅದನ್ನೆಲ್ಲಾ ಮರೆತಿದ್ದೇನೆ ಎಂದಿದ್ದಾರೆ.

ಗಂಗೂಲಿ ಜತೆ ನನಗೆ ಮುನಿಸಿಲ್ಲ. ವ್ಯಕ್ತಿಗಳಿಗಿಂತ ತಂಡದ ಹಿತ ಮುಖ್ಯ. ಹಾಗಾಗಿ ವೈಯಕ್ತಿಕ ಅಸಮಾಧಾನಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಹಳೆಯದನ್ನೆಲ್ಲಾ ಮರೆತು ಕೆಲಸ ಮಾಡಲು ಇದು ಸೂಕ್ತ ಕಾಲ. ನಾವೆಲ್ಲಾ ಭಾರತ ಏಳಿಗೆಗಾಗಿ ಶ್ರಮಿಸಬೇಕು ಎಂದು ಒಗ್ಗಟ್ಟಿನ ಪಾಠ ಹೇಳಿದ್ದಾರೆ.

ಇದನ್ನೂ ಓದಿ..  ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ