ರವಿ ಶಾಸ್ತ್ರಿ ಮನ ಒಲಿಸಿದ್ದು ಸಚಿನ್ ತೆಂಡುಲ್ಕರ್?!

ಗುರುವಾರ, 29 ಜೂನ್ 2017 (07:21 IST)
ಲಂಡನ್: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುವಂತೆ ಕೊನೆಯ ಕ್ಷಣದಲ್ಲಿ ರವಿ ಶಾಸ್ತ್ರಿ ಮನ ಒಲಿಸಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಎಂದು ಆಂಗ್ಲ ಮಾಧ್ಯಮವೊಂದರಲ್ಲಿ ವರದಿಯಾಗಿದೆ.

 
ಕಳೆದ ಬಾರಿ ಕೋಚ್ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಕಡೆ ಕ್ಷಣದಲ್ಲಿ ಅವರನ್ನು ಕೈ ಬಿಟ್ಟಿದ್ದರಿಂದ ಈ ಬಾರಿ ಅವರು ಅರ್ಜಿ ಹಾಕುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರ ಒಲವು ಅವರ ಕಡೆಗಿರುವುದರಿಂದ ಸಚಿನ್ ಸದ್ಯಕ್ಕೆ ಲಂಡನ್ ನಲ್ಲಿರುವ ಶಾಸ್ತ್ರಿ ಮನ ಒಲಿಸಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ಬಾರಿ ಕೋಚ್ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲೂ ತೆಂಡುಲ್ಕರ್ ಆಟಗಾರರ ಮತ ಗಮನದಲ್ಲಿಟ್ಟುಕೊಂಡು ಶಾಸ್ತ್ರಿಯನ್ನೇ ಆಯ್ಕೆ ಮಾಡಲು ಬಯಸಿದ್ದರು. ಆದರೆ ಗಂಗೂಲಿ ಕುಂಬ್ಳೆಗೆ ಮಣೆ ಹಾಕಿದ್ದರು. ಅವರಿಗೆ ಲಕ್ಷ್ಮಣ್ ಬೆಂಬಲವೂ ಇದ್ದಿದ್ದರಿಂದ ಕುಂಬ್ಳೆ ಕೋಚ್ ಆಗಿ ಆಯ್ಕೆಯಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ