ಕಳೆದ 9ವರ್ಷಗಳಿಂದ ವಿಶೇಷ ಬಾಲಮಂದಿರದಲ್ಲಿ ವಾಸಿಸುತ್ತಿದ್ದ ರಾಹುಲ್ ಎಂಬ ಯುವಕನನ್ನು ದತ್ತು ಪಡೆಯಲು ಸಿರಿವಂತ ಉದ್ಯಮಿಗಳೊಬ್ಬರು ನಿರ್ಧರಿಸಿದ್ದು ತಂದೆ-ತಾಯಿ ಪ್ರೀತಿ ಜತೆಗೆ ಧನಿಕನಾಗುವ ಭಾಗ್ಯವು ಕೂಡ ಆತನನ್ನು ಅರಸಿ ಬಂದಿದೆ. ಈತನ ಉತ್ತಮ ನಡತೆ ಆತನಿಗೆ ಈ ಹೊಸ ಜೀವನವನ್ನು ನೀಡಿದೆ. 18 ವರ್ಷದವನಾಗಿರುವ ಆತ ಓದಿನಲ್ಲೂ ಅಪಾರ ಬುದ್ಧಿವಂತನಾಗಿದ್ದು ಜಾಮನಗರದ ತಾಮ್ರ ಲೋಹದ ಉದ್ಯಮಿಯೊಬ್ಬರು ಆತನನ್ನು ದತ್ತು ಪಡೆದುಕೊಂಡಿದ್ದಾರೆ.