ರಜನೀಕಾಂತ್ ಪುತ್ರಿ ಕಾರು ಅಪಘಾತ, ರಕ್ಷಿಸಿದ ಅಳಿಯ ಧನುಷ್!

ಮಂಗಳವಾರ, 28 ಫೆಬ್ರವರಿ 2017 (16:27 IST)
ಚೆನ್ನೈ: ರಜನೀಕಾಂತ್ ಪುತ್ರಿ, ನಿರ್ದೇಶಕಿ ಸೌಂದರ್ಯ ರಜನೀಕಾಂತ್ ಅಪಘಾತ ಮಾಡಿಕೊಂಡಿದ್ದಾರೆ. ಆದರೆ ಇದು ಪೊಲೀಸ್ ಕೇಸು ಆಗದಂತೆ ಸಹೋದರಿ ಐಶ್ವರ್ಯಾ ಪತಿ ಹಾಗೂ ಚಿತ್ರನಟ ಧನುಷ್ ಕಾಪಾಡಿದ್ದಾರೆ. ಏನಿದು ಘಟನೆ? ಓದಿ.


ಬೆಳಿಗ್ಗೆ ಸೌಂದರ್ಯ ಚಲಾಯಿಸುತ್ತಿದ್ದ ಕಾರು ಅಕಸ್ಮಾತ್ತಾಗಿ ಅಪಘಾತಕ್ಕೀಡಾಗಿ ಪಕ್ಕದಲ್ಲಿದ್ದ  ಅಟೋ ರಿಕ್ಷಾ ಮೇಲೆ ಹರಿದಿದೆ. ಇದರಿಂದ ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಸೌಂದರ್ಯ ತಪ್ಪಿನಿಂದಾಗಿ ಘಟನೆ ನಡೆದಿದ್ದರಿಂದ ರಿಕ್ಷಾ ಚಾಲಕ ಪೊಲೀಸ್ ಠಾಣೆಯವರೆಗೆ ಪ್ರಕರಣ ತಲುಪಿದೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಧನುಷ್ ರಿಕ್ಷಾ ಚಾಲಕನ ಕಡೆಯವರನ್ನು ಸಮಾಧಾನಿಸಿ, ಎಫ್ ಐಆರ್ ದಾಖಲಾಗದಂತೆ ತಡೆದಿದ್ದಾರೆ. ಧನುಷ್ ಸಂಧಾನ ನಡೆಸಿ ಪೊಲೀಸ್ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ