ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ಪರಿಣಿತರಿಂದ ಸಹ ಈ ರಹಸ್ಯವನ್ನು ಬಗೆಹರಿಸಲಾಗಿಲ್ಲ. 2014ರ ಸೆಪ್ಟಂಬರ್ 10ರಂದು ಮೊದಲ ಬಾರಿ ಈ ಘಟನೆ ನಡೆದಿತ್ತು. ಆಗ ಕುಟುಂಬದವರು ಪೂಜೆ, ಹೋಮಹವನವನ್ನು ಮಾಡಿಸಿದ್ದಾರೆ. ತದನಂತರ ನಾಲ್ಕು ತಿಂಗಳುಗಳ ಕಾಲ ಈ ಸಮಸ್ಯೆ ನಿವಾರಣೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಮತ್ತೆ ಬೆಂಕಿ ಅನಾಹುತ ಪ್ರಾರಂಭವಾಗಿದ್ದು, ಕುಟುಂಬದವರು ನಿದ್ದೆಗೆಟ್ಟು ಜೀವನ ನಡೆಸುವಂತಾಗಿದೆ.
ಅಷ್ಟೇ ಅಲ್ಲದೇ ಇತ್ತೀಚಿಗೆ ಕೋಣೆಯೊಂದರ ಗೋಡೆಯ ಮೇಲೆ, "ಈ ಮನೆ ಬಿಟ್ಟು ಹೊರಟು ಹೋಗಿ, ಇಲ್ಲವಾದರೆ ನಾನು ಎಲ್ಲರನ್ನೂ ಕೊಲ್ಲುತ್ತೇನೆ" ಎಂದು ಬರೆದಿರುವುದು ಕಂಡು ಬಂದಿದೆ.