ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಮಂದಿ ಸಾವನ್ನಪ್ಪಿದ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಬೇಡಿಕೆ ಹೆಚ್ಚಾಗಿರುವ ಸುದ್ದಿಯೊಂದು ಹರಿದಾಡುತ್ತಿದೆ.
ವಿಮಾನ ದುರಂತದಲ್ಲಿ 241ಮಂದಿ ಸಾವನ್ನಪ್ಪಿದ್ದು, ಈ ದುರ್ಘಟನೆಯಲ್ಲಿ ಒಬ್ಬರಷ್ಟೇ ಬದುಕುಳಿದ್ದಿದ್ದರು. ಸೀಟ್ 11A ಕುಳಿತಿದ್ದ 40 ವರ್ಷದ ವಿಶ್ವಕುಮಾರ್ ರಮೇಶ್ ಎಂಬವವರು ಮಾತ್ರ ಪ್ರಾಣಪಾಯದಿಂದ ಪಾರಾಗಿದ್ದರು. ಉಳಿದ 241 ಮಂದಿಯೂ ಕೂಡಾ ಸಾವನ್ನಪ್ಪಿದರು.
ಇದೀಗ ಭಾರತೀಯ ಟ್ರಾವೆಲ್ ಏಜೆಂಟ್ಗಳಲ್ಲಿ 11Aಆಸನಕ್ಕಾಗಿ ವಿನಂತಿಗಳು ಹೆಚ್ಚು ಬರುತ್ತಿವುದನ್ನು ವರದಿ ಮಾಡಲಾಗಿದೆ. ಈ ಸೀಟಿಗಾಗಿ ಪ್ರಯಾಣಿಕರು ಹೆಚ್ಚುವರಿ ಹಣವನ್ನು ಪಾವತಿಸಲು ಸಿದ್ದರಿದ್ದಾರೆ.
ಬೋಯಿಂಗ್ 787 ಡ್ರೀಮ್ಲೈನರ್ ಟೇಕಾಫ್ ಆದ ಕೆಲವೇ ಕ್ಷಣಗಳ್ಲಲಿ ವೈದ್ಯಕೀಯ ಸಂಕೀರ್ಣಕ್ಕೆ ಅಪ್ಪಳಿಸಿದ ನಂತರ ಯುಕೆ ಮೂಲದ ಪ್ರಯಾಣಿಕ ರಮೇಶ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಈ ದುರ್ಘಟನೆಯಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದ ಅವನ ಸಹೋದರ ದುರಂತವಾಗಿ ಬದುಕುಳಿಯಲಿಲ್ಲ.