ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

Sampriya

ಶುಕ್ರವಾರ, 20 ಜೂನ್ 2025 (18:36 IST)
ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಮಂದಿ ಸಾವನ್ನಪ್ಪಿದ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಬೇಡಿಕೆ ಹೆಚ್ಚಾಗಿರುವ ಸುದ್ದಿಯೊಂದು ಹರಿದಾಡುತ್ತಿದೆ. 

ವಿಮಾನ ದುರಂತದಲ್ಲಿ 241ಮಂದಿ ಸಾವನ್ನಪ್ಪಿದ್ದು, ಈ ದುರ್ಘಟನೆಯಲ್ಲಿ ಒಬ್ಬರಷ್ಟೇ ಬದುಕುಳಿದ್ದಿದ್ದರು. ಸೀಟ್ 11A ಕುಳಿತಿದ್ದ 40 ವರ್ಷದ ವಿಶ್ವಕುಮಾರ್ ರಮೇಶ್ ಎಂಬವವರು ಮಾತ್ರ ಪ್ರಾಣಪಾಯದಿಂದ ಪಾರಾಗಿದ್ದರು. ಉಳಿದ 241 ಮಂದಿಯೂ ಕೂಡಾ ಸಾವನ್ನಪ್ಪಿದರು. 

ಇದೀಗ ಭಾರತೀಯ ಟ್ರಾವೆಲ್ ಏಜೆಂಟ್‌ಗಳಲ್ಲಿ 11Aಆಸನಕ್ಕಾಗಿ ವಿನಂತಿಗಳು ಹೆಚ್ಚು ಬರುತ್ತಿವುದನ್ನು ವರದಿ ಮಾಡಲಾಗಿದೆ. ಈ ಸೀಟಿಗಾಗಿ ಪ್ರಯಾಣಿಕರು ಹೆಚ್ಚುವರಿ ಹಣವನ್ನು ಪಾವತಿಸಲು ಸಿದ್ದರಿದ್ದಾರೆ. 

ಬೋಯಿಂಗ್ 787 ಡ್ರೀಮ್‌ಲೈನರ್ ಟೇಕಾಫ್ ಆದ ಕೆಲವೇ ಕ್ಷಣಗಳ್ಲಲಿ ವೈದ್ಯಕೀಯ ಸಂಕೀರ್ಣಕ್ಕೆ ಅಪ್ಪಳಿಸಿದ ನಂತರ ಯುಕೆ ಮೂಲದ ಪ್ರಯಾಣಿಕ ರಮೇಶ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಈ ದುರ್ಘಟನೆಯಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದ ಅವನ ಸಹೋದರ ದುರಂತವಾಗಿ ಬದುಕುಳಿಯಲಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ