ಖರ್ಗೆ ಹಳೆಯ ಎತ್ತು, ಜಾಧವ್ ಕಿಲಾರಿ ಎತ್ತು ಎಂದೋರಾರು?

ಬುಧವಾರ, 17 ಏಪ್ರಿಲ್ 2019 (19:20 IST)
ಮಲ್ಲಿಕಾರ್ಜುನ ಖರ್ಗೆ ಅವರ ಪಾಪದ ಕೊಡ ತುಂಬಿದೆ. ಖರ್ಗೆಗೆ ನಡುಕ ಶುರುವಾಗಿದೆ. ಈಗ ಎಲ್ಲರನ್ನು ಕರೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ದುಡ್ಡು ಚೆಲ್ಲುತ್ತಿದ್ದಾರೆ ಎಂದು ಮಾಜಿ ಸಚಿವ ಗಂಭೀರ ಆರೋಪ ಮಾಡಿದ್ದಾರೆ.

ಯಾದಗಿರಿಯ ಸೈದಾಪುರ ನಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ ಪ್ರಚಾರದಲ್ಲಿ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಅವರ ಹಣ ಪಡೆದು ಬಿಜೆಪಿ ಗೆ ಮತ ಹಾಕಿ, ಲೋಕಸಭಾ ಚುನಾವಣೆ ನಂತರ ಸರಕಾರ ಪತನವಾಗಲಿದೆ ಎಂದರು.
ನಾನು ಮಾಲಿಕಯ್ಯ ಗುತ್ತೇದಾರ ಜೋಡೆತ್ತುಗಳು.

ಖರ್ಗೆ ಅವರು 50 ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನನಗೆ ಎರಡು ಗುರಿ ಇವೆ. ಮೋದಿ ಅವರನ್ನು ಪ್ರಧಾನಿ ಮಾಡುವದು, ಬಿ.ಎಸ್.ವೈ ಅವರನ್ನು ಸಿಎಂ ಮಾಡುವದು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಳೆ ಎತ್ತು, ಉಮೇಶ್ ಜಾಧವ್ ಕಿಲಾರಿ ಎತ್ತು, ಕಿಲಾರಿ ಎತ್ತು ಗುದ್ದುತ್ತದೆ ಎಂದು ಟಾಂಗ್ ನೀಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ