ರಾಹುಲ್ ಗಾಂಧಿ ದೇಹವನ್ನು ಉಗ್ರರು ಛಿದ್ರ ಮಾಡಿದ್ದಾರೆಂದ ಕೈ ಮುಖಂಡ

ಬುಧವಾರ, 17 ಏಪ್ರಿಲ್ 2019 (15:53 IST)
ಚುನಾವಣೆ ಪ್ರಚಾರದ ವೇಳೆ ಕೈ ಪಕ್ಷದ ನಾಯಕರಿಂದ ಎಡವಟ್ಟು ಹೇಳಿಕೆಗಳು ಹೊರಬರುತ್ತಲೇ ಇವೆ.  

ಪ್ರಚಾರದ ವೇಳೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಡವಟ್ಟು ಹೇಳಿಕೆ ನೀಡಿದ್ದಾರೆ. ಉಗ್ರಗಾಮಿಗಳು ರಾಹುಲ್ ಗಾಂಧಿಯ ದೇಹವನ್ನು ಛಿದ್ರ ಛಿದ್ರ ಮಾಡಿದರೆಂದು ಹೇಳಿಕೆ ನೀಡಿದ್ದಾರೆ.
ಉಗ್ರರು ಇಂದಿರಾ ಗಾಂಧಿಯನ್ನು ಕೊಂದರು. ನಂತರ ರಾಹುಲ್ ಗಾಂಧಿಯ ದೇಹವನ್ನೂ ಛಿದ್ರ ಛಿದ್ರಗೊಳಿಸಿದರು. ಕಾಂಗ್ರೆಸ್ ನಾಯಕರು ಪಕ್ಷಕ್ಕಾಗಿ ತನ್ನದೇ ಆದ ತ್ಯಾಗ ಮಾಡಿದ್ದಾರೆ ಎಂದರು.

ಕಲಬುರಗಿಯ ಭಾವಸಾರ ಕ್ಷತ್ರೀಯ ಸಮಾಜದ ಸಭಾ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ರಾಜೀವ್ ಗಾಂಧಿ ಎನ್ನುವ ಬದಲಿಗೆ ರಾಹುಲ್ ಗಾಂಧಿ ಎಂದ ಖರ್ಗೆ ಆ ಬಳಿಕ ತಮ್ಮ ಮಾತಿನ ತಪ್ಪನ್ನು ಸರಿಪಡಿಸುವ ಗೊಡವೆಗೂ ಹೋಗಲಿಲ್ಲ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ