ಪ್ರಧಾನಿ ಮೋದಿ ಭಯೋತ್ಪಾದಕನಂತೆ: ಚಂದ್ರಬಾಬು ನಾಯ್ಡು

ಬುಧವಾರ, 3 ಏಪ್ರಿಲ್ 2019 (15:16 IST)
ಚಿತ್ತೂರ್:  ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಜೈಲಿಗೆ ತಳ್ಳುವ ಸಂಚು ರೂಪಿಸುತ್ತಿರುವ ಪ್ರಧಾನಿ ಮೋದಿ ಭಯೋತ್ಪಾದಕನಿದ್ದಂತೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಒಬ್ಬ ಭಯೋತ್ಪಾದಕ ಒಳ್ಳೆಯ ವ್ಯಕ್ತಿಯಲ್ಲ. ಒಂದು ವೇಳೆ ಮೋದಿ ತಿರುಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
 
ದೇಶದಲ್ಲಿ ತ್ರಿವಳಿ ತಲಾಕ್ ಜಾರಿಗೆ ತಂದು ಅಲ್ಪಸಂಖ್ಯಾತರನ್ನು ಜೈಲಿಗೆ ಅಟ್ಟುವ ಸಂಚು ರೂಪಿಸಲಾಗಿದೆ.ಗೋದ್ರಾದ ನಂತರ ನಡೆದ ಗುಜರಾತ್ ಹಿಂಸಾಚಾರದಲ್ಲಿ 2000 ಕ್ಕೂ ಅಧಿಕ ಮುಸ್ಲಿಮರು ಹತ್ಯೆಯಾಗಿದ್ದಾರೆ. ಆ ಸಂದರ್ಭದಲ್ಲಿಯೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದೆ. ಯಾವುದೇ ದೇಶ ಕೂಡಾ ಮೋದಿಯನ್ನು ದೇಶದೊಳಗೆ ಕಾಲಿಡದಂತೆ ಆದೇಶ ನೀಡಿದ್ದವು. ಇದೀಗ ಮೋದಿ ಪ್ರಧಾನಿಯಾಗಿ ಮತ್ತೆ ಮುಸ್ಲಿಮರನ್ನು ತುಳಿಯಲು ಸಂಚು ರೂಪಿಸಿದ್ದಾರೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ