ಹೆಚ್.ಡಿ.ದೇವೇಗೌಡರಿಗೆ ತಟ್ಟಲಿದೆಯಾ ಬಂಡಾಯದ ಬಿಸಿ?

ಸೋಮವಾರ, 8 ಏಪ್ರಿಲ್ 2019 (17:38 IST)
ಮೈತ್ರಿ ಅಭ್ಯರ್ತಿ ಬೆಂಬಲಿಸಲು ಹಿಂದೇಟು ಹಾಕುತ್ತಿರುವ ಪ್ರಸಂಗಗಳು ಮರುಕಳಿಸುತ್ತಿವೆ.

ತುಮಕೂರಿನಲ್ಲಿ  ಕೆ.ಎನ್. ರಾಜಣ್ಣರ ಬೆಂಬಲಿಗರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೆಚ್.ಡಿ.ದೇವೇಗೌಡರಿಗೆ ತಟ್ಟಲಿದೆಯಾ ರಾಜಣ್ಣರ ಬಂಡಾಯದ ಬಿಸಿ ಎನ್ನುವ ಮಾತು ಕೇಳಿಬರುತ್ತಿದೆ.

ಮುಂದಿನ ಹೆಜ್ಜೆ ಎಚ್ಚರದಿಂದ ಇಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪಂ‌ಚಾಯಿತಿ ಸದಸ್ಯ ಚೌಡಯ್ಯ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ನವರು ಹಾವು  ಮುಂಗಿಸಿ ಥರ ಕಿತ್ತಾಡಿಕೊಂಡು ಬಂದಿದ್ದೇವೆ.

ಮುಂದಿನ ಹೆಜ್ಜೆ ಯಾವ ರೀತಿ ಹಾಕಬೇಕು ಅನ್ನೋದು ಚಿಂತನೆ ಮಾಡಬೇಕಿದೆ ಎಂದರು.
ಮುಂದಿನ‌‌ ಚುನಾವಣೆಯಲ್ಲಿ ರಾಜಣ್ಣರ ಆದೇಶದಂತೆ ನಾವು ಮತ ಹಾಕಬೇಕು. ರಾಜಣ್ಣರೇ ನಮಗೆ‌ಹೈ ಕಮಾಂಡ್.
ಅವರ ಆದೇಶವೇ ನಮಗೆ‌ ಅಂತಿಮ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ