ಸುಮಲತಾ ಅಂಬರೀಶ್ ಗೆ ಚುನಾವಣಾ ಖರ್ಚಿಗೆ ಹಣ ನೀಡಿದ ಅಂಬಿ ಅಭಿಮಾನಿಗಳು

ಬುಧವಾರ, 3 ಏಪ್ರಿಲ್ 2019 (11:15 IST)
ಮಂಡ್ಯ: ಮಂಡ್ಯ ಲೋಕಸಭಾ ಕಣದಲ್ಲಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿರುವ ಸುಮಲತಾ ಅಂಬರೀಶ್  ಇಂದು ಶಿವಪುರದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ.


ಈ ವೇಳೆ ಮಾತನಾಡಿರುವ ಸುಮಲತಾ ತಮ್ಮ ಜಾತಿ ವಿಚಾರ ಕೆದಕಿ ಟಾಂಗ್ ಕೊಟ್ಟಿರುವ ಶಿವರಾಮೇಗೌಡರಿಗೆ ತಿರುಗೇಟು ನೀಡಿದ್ದಾರೆ. ಮಹಿಳೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಬಾಯಿಗೆ ಬಂದ ಹಾಗೆ ಆರೋಪ ಮಾಡುತ್ತಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

ಇನ್ನು, ಸುಮಲತಾ ರೋಡ್ ಶೋ ವೇಳೆ ಅಂಬರೀಶ್ ಅಪ್ಪಟ ಅಭಿಮಾನಿಗಳಾದ ಶಿವು, ನಂದೀಶ್ ಎಂಬವರು ಚುನಾವಣಾ ಖರ್ಚಿಗೆಂದು 5000 ರೂ. ನೀಡಿದ್ದಾರೆ. ಈ ಮೂಲಕ ಸುಮಲತಾಗೆ ತಮ್ಮ ಬೆಂಬಲ ನೀಡಿದ್ದಾರೆ.

ಇನ್ನೊಂದೆಡೆ ಯಶ್ ಮತ್ತು ದರ್ಶನ್ ಕೂಡಾ ಸುಮಲತಾ ಪರವಾಗಿ ಪ್ರಚಾರ ನಡೆಸುತ್ತಿದ್ದು, ಬಿರು ಬಿಸಿಲಿಗೆ ರೋಡ್ ಶೋ ನಡೆಸುತ್ತಿದ್ದಾರೆ. ಈ ಸ್ಟಾರ್ ನಟರ ಪ್ರಚಾರಕ್ಕೆ ಬರುತ್ತಿರುವ ಕಾರಣಕ್ಕೆ ಸಾಕಷ್ಟು ಜನ ಬಿಸಿಲನ್ನೂ ಲೆಕ್ಕಿಸದೇ ರಸ್ತೆಯ ಎರಡೂ ಬದಿಯಲ್ಲಿ ಜಮಾಯಿಸಿರುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ