ಕ್ಯಾಂಡಲ್ ಮಾರ್ಚ್ ಮಾಡಿದ್ದು ಮತದಾನ ಜಾಗೃತಿಗಾಗಿ...

ಶುಕ್ರವಾರ, 12 ಏಪ್ರಿಲ್ 2019 (21:16 IST)

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ  ಮತದಾನ ಜಾಗೃತಿಗಾಗಿ  ಬೃಹತ್ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

ಕಲಬುರಗಿ ನಗರದ ಲಾಲ್‍ಗೇರಿ ಕ್ರಾಸ್, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಬಸವೇಶ್ವರ ಆಸ್ಪತ್ರೆ ಹಾಗೂ ನಗರೇಶ್ವರ ಹೀಗೆ ನಾಲ್ಕು ಭಾಗಗಳಿಂದ ಬಂದ ಕ್ಯಾಂಡಲ್ ಮಾರ್ಚ ಮೆರವಣಿಗೆಯು ಕಲಬುರಗಿ ನಗರದ ಜಗತ್ ವೃತ್ತಕ್ಕೆ ಬಂದು ಸಮಾಪನೆಗೊಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿಯ ಕ್ಯಾಂಡಲ್ ಮಾರ್ಚಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಚಾಲನೆ ನೀಡಿದರು.

ಮಾರ್ಗದುದ್ದಕ್ಕೂ ಎಲ್ಲ ಇಲಾಖೆಯ ಅಧಿಕಾರಿಗಳು ಮತದಾನ ಮಾಡುವ ಕುರಿತು ಘೋಷಣೆ ಕೂಗಿ ಜನರಿಗೆ ಅರಿವು ಮೂಡಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ