ರಾಹುಲ್ ಗಾಂಧಿಯ ಬಗ್ಗೆ ಎಡವಟ್ಟು ಹೇಳಿಕೆ ನೀಡಿದ ಸಿಎಂ ಇಬ್ರಾಹಿಂ

ಮಂಗಳವಾರ, 2 ಏಪ್ರಿಲ್ 2019 (11:10 IST)
ಬಾಗಲಕೋಟೆ : ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೊಗಳುವ ಭರದಲ್ಲಿ  ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಅವರು ಯಡವಟ್ಟು ಹೇಳಿಕೆಯೊಂದನ್ನು ನೀಡಿದ್ದಾರೆ.


ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಬಿಜೆಪಿಯವರು ಯಾರೂ ಸತ್ತಿಲ್ಲ. ಆದರೆ ಕಾಂಗ್ರೆಸ್‍ ನ ಇಂದಿರಾ ಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಸತ್ತಿದ್ದಾರೆ  ಎಂದು ಹೇಳುವುದರ ಮೂಲಕ ರಾಹುಲ್ ಗಾಂಧಿ ಅವರನ್ನು ಸತ್ತರ ಸಾಲಿಗೆ ಸೇರಿಸಿದ್ದಾರೆ.


ಇನ್ನು ಸಿದ್ದರಾಮಯ್ಯ ಕುರುಬ ಅಲ್ಲ, ಅವರ ಮೈಯಲ್ಲಿ ಕುರುಬರ ರಕ್ತ ಹರಿಯುತ್ತಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈಶ್ವರಪ್ಪನಿಗೆ ನಾಚಿಕೆಯಾಗಬೇಕು. ಅವನು ಬಿಜೆಪಿಯಲ್ಲಿರೋದೆ ದಂಡ. ಒಬ್ಬ ಕುರುಬ ಸಮುದಾಯದವನಿಗೆ ಟಿಕೆಟ್ ಕೊಡಿಸೋಕೆ ಆಗಲಿಲ್ಲ ಅವನಿಗೆ ಎಂದು ಏಕ ವಚನದಲ್ಲಿ ಇಬ್ರಾಹಿಂ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ