ಕೇಂದ್ರ ಸರ್ಕಾರದ ಧೋರಣೆ ಇಂಚಿಂಚು ಬಿಚ್ಚಿಡಿ ಎಂದ ಸಂಸದ

ಸೋಮವಾರ, 1 ಏಪ್ರಿಲ್ 2019 (19:11 IST)
ಕೇಂದ್ರ ಸರ್ಕಾರದ ಧೋರಣೆಯನ್ನು ಇಂಚಿಂಚು ಬಿಚ್ಚಿಡುವುದರ ಮೂಲಕ, ಕೋಮುವಾದಿ  ಬಿಜೆಪಿಯನ್ನ ಸೋಲಿಸಬೇಕು. ಹೀಗಂತ ಸಂಸದರೊಬ್ಬರು ಹೇಳಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಕೆಂಪನಪುರ, ಗೂಳಿಪುರ, ಇರಸವಾಡಿ ಮಸಣಪುರ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಸದ ಆರ್. ಧ್ರುವನಾರಾಯಣ್ ಮತಯಾಚನೆ ನಡೆಸಿದ್ರು.

ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಶಾಸಕ ಬಾಲರಾಜ್  ಜೊತೆಗೂಡಿ ಮತ ಯಾಚನೆ ನಡೆಸಿದರು.
ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಮೂಲಕ, ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡಿ, ದೇಶದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ