ಭ್ರಷ್ಟಾಚಾರದಲ್ಲಿ ಪ್ರಧಾನಿ ಭಾಗಿದಾರ್ ಎಂದ ಮಾಜಿ ಸಿಎಂ

ಶನಿವಾರ, 13 ಏಪ್ರಿಲ್ 2019 (19:40 IST)
ಮೋದಿ ತನ್ನನ್ನು ತಾನೇ ಚೌಕಿದಾರ್ ಎಂದು ಸ್ವಯಂಘೋಷಿತ ಬಿರುದನ್ನು ಹಾಕಿಕೊಂಡಿದ್ದಾರೆಯೇ ಹೊರತು ರಾಷ್ಟ್ರಪತಿಗಳು ಮೋದಿಗೆ ಚೌಕಿದಾರ್ ಎಂದು ಬಿರುದು ಕೊಟ್ಟಿಲ್ಲ. ಮೋದಿ ಚೌಕಿದಾರ್ ಅಲ್ಲ‌.

ಅವರೊಬ್ಬ 'ಭ್ರಷ್ಟಾಚಾರದಲ್ಲಿ ಭಾಗಿದಾರ್' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ‌ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೋಲಾರದಲ್ಲಿ ನಡೆದ ಪರಿವರ್ತನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಹಿಂದೆ ತಾವು ನೀಡಿದ ಭರವಸೆಗಳ ಬಗ್ಗೆಯಾಗಲಿ, ಮುಂದೆ ದೇಶಕ್ಕಾಗಿ ಏನು ಮಾಡುತ್ತೇವೆ ಎಂಬ ಬಗ್ಗೆಯಾಗಲಿ ದಲಿತರ, ಜನಸಾಮಾನ್ಯರ, ಅಲ್ಪಸಂಖ್ಯಾತರ ಬಗ್ಗೆಯಾಗಲಿ ಮಾತನಾಡುತ್ತಿಲ್ಲ. ಮೋದಿ ಅವರನ್ನು  ಜನರು ಚೋರ್ ಹೈ ಎಂದು ‌ಕರೆಯಲು ಆರಂಭಿಸಿದ್ದಾರೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ