ಜನರ ಸೇವೆಗಾಗಿಯೇ ನನ್ನ ಜೀವನ ಮುಡಿಪು-ಮೋದಿ

ಗುರುವಾರ, 23 ಮೇ 2019 (20:50 IST)
ನವದೆಹಲಿ: ಅಭೂತಪೂರ್ಣ ಯಶಸ್ಸಿನ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಈ ಹಬ್ಬ ಮಾದರಿಯಾಗಿದೆ. ಇದನ್ನು ಯಶಸ್ವಿ ಮಾಡಿದ ಜನತಾ ಜನಾರ್ದನರಿಗೆ ನಮೋ ನಮಃ, ಇಲ್ಲಿ ಯಾರಾದರೂ ಗೆದ್ದಿದ್ದಾರೆ ಅಂದು ಜನತಾ ಜನಾರ್ದನರ ವಿಜಯ, ಇದು ಲೋಕತಂತ್ರದ ಜಯ ಎಂದು ಹೇಳಿದ್ದಾರೆ.





ಇಂದಿನ ಬಿಜೆಪಿ ಗೆಲುವು ಇತಿಹಾಸವನ್ನು ಬರೆದಿದೆ. ಸ್ವತಂತ್ರ ಭಾರತದ ಮೊದಲ ಬಾರಿಗೆ ರಣ ರಣ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಂದು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಲೋಕತಂತ್ರದ ಹಬ್ಬದಲ್ಲಿ ಕೆಲಸ ಮಾಡಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.


ನಾನು ಏನೇ ಮಾಡಿದರೂ ಅಭಿವೃದ್ಧಿಗಾಗಿ ಮಾಡುತ್ತೇನೆ. ಈ ರೀತಿಯ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದುನ್ನು ಎಂದಿಗೂ ಮರೆಯುವುದಿಲ್ಲ. ನಾನು ಯಾವುದನ್ನೂ ಮರೆಯುವುದಿಲ್ಲ. ಜನರ ಸೇವೆಗಾಗಿಯೇ ನನ್ನ ಜೀವನ ಮುಡಿಪು ಎಂದು ಮೋದಿ ಹೇಳಿದ್ದಾರೆ.


ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು ಎಂದು ಮೋದಿ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ