ಅಮೇಥಿಯಲ್ಲಿ ನಮಾಜ್, ಉಜ್ಜೈನಿಯಲ್ಲಿ ದೇವಾಲಯ! ಪ್ರಿಯಾಂಕಾ ವಾದ್ರಾಗೆ ಸ್ಮೃತಿ ಇರಾನಿ ಟಾಂಗ್

ಶುಕ್ರವಾರ, 17 ಮೇ 2019 (09:56 IST)
ನವದೆಹಲಿ: ಅಮೇಥಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಅಮೇಥಿಗೆ ಬಂದರೆ ನಮಾಜ್ ಮಾಡುವ ಪ್ರಿಯಾಂಕಾ, ಉಜ್ಜೈನಿಗೆ ಬಂದರೆ ಹಿಂದೂ ದೇವಾಲಯಕ್ಕೆ ಪ್ರದಕ್ಷಿಣೆ ಬರುತ್ತಾರೆ ಎಂದು ಸ್ಮೃತಿ ಇರಾನಿ ಲೇವಡಿ ಮಾಡಿದ್ದಾರೆ.

‘ಕಾಂಗ್ರೆಸ್ ಎಷ್ಟು ಹತಾಶವಾಗಿದೆಯೆಂದರೆ ಪಕ್ಷದ ಕಾರ್ಯದರ್ಶಿಗಳು ಅಮೇಥಿಗೆ ಬಂದಾಗ ಜನರ ಮುಂದೆ ನಮಾಜ್ ಮಾಡುತ್ತಾರೆ, ಉಜ್ಜೈನಿಗೆ ಹೋದರೆ ದೇವಾಲಯಕ್ಕೆ ನಮಸ್ಕಾರ ಮಾಡುತ್ತಾರೆ’ ಎಂದು ಪ್ರಿಯಾಂಕಾ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ