ಆಧುನಿಕ ಕಾಲದಲ್ಲೂ ಮೂಢನಂಬಿಕೆಗಳು ಎಷ್ಟೊಂದು ಬೇರೂರಿವೆ ಎಂಬುದಕ್ಕೆ ಸ್ಪಷ್ಟ ದೃಷ್ಟಾಂತವಿದು. ತನಗೆ ಶೀಘ್ರ ಮದುವೆ ಯೋಗ ಬರಲಿ ಎಂದು ಯುವಕನೋರ್ವ ಒಂದುವರೆ ವರ್ಷದ ಪುಟ್ಟ ಮಗುವನ್ನು ದೇವಿಗೆ ಬಲಿ ನೀಡಿದ ಅಮಾನುಷ, ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದಿದೆ.
ತನಗೆ ಬೇಗ ಮದುವೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದ ಆತ ಅದಕ್ಕೆ ಪ್ರತಿಯಾಗಿ ದೇವಿಗೆ ನರಬಲಿ ನೀಡುವುದಾಗಿ ಹರಕೆ ಹೊತ್ತಿದ್ದ. ಅದರಂತೆ ನೆರೆಮನೆಯ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ದೇವಿ ಮುಂದೆ ಅತ್ಯಂತ ಕ್ರೂರವಾಗಿ ಅದನ್ನು ಕೊಂದಿದ್ದಾನೆ. ಮೊದಲು ಮಗುವಿನ ಕಾಲಿಗೆ ಹರಿತವಾದ ಆಯುಧದಿಂದ ಚುಚ್ಚಿ ಬಳಿಕ ದೇವಸ್ಥಾನದ ಮೆಟ್ಟಿಲುಗಳಿಗೆ ಆಕೆಯ ತಲೆಯನ್ನು ಜಜ್ಜಿ ಕೊಂದಿದ್ದಾನೆ.