ಅನಿಲ ಸೋರಿಕೆ ಹಿನ್ನಲೆ; ಕೇರಳದ 8 ಮಂದಿ ಪ್ರವಾಸಿಗರು ಸಾವು

ಬುಧವಾರ, 22 ಜನವರಿ 2020 (06:26 IST)
ಕಠ್ಮಂಡು: ಅನಿಲ ಸೋರಿಕೆಯಾದ ಹಿನ್ನಲೆಯಲ್ಲಿ ನೇಪಾಳದ ದಾಮನ್ ರೆಸಾರ್ಟ್ ಯೊಂದರಲ್ಲಿ  ನಾಲ್ವರು ಮಕ್ಕಳು ಸೇರಿ ಒಟ್ಟು 8 ಮಂದಿ ಕೇರಳದ ಪ್ರವಾಸಿಗರು ಮೃತಪಟ್ಟಿದ್ದಾರೆ.



ಕೇರಳದಿಂದ ಒಟ್ಟು 15 ಜನರ ತಂಡವು ನೇಪಾಳಕ್ಕೆ ಪ್ರವಾಸಕ್ಕೆಂದು ಬಂದಿದ್ದು, ಎವೆರೆಸ್ಟ್ ಪನೋರಮಾ  ಎಂಬ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಕೊಠಡಿ ಬೆಚ್ಚಗೆ ಇರಲು ಗ್ಯಾಸ್ ಹೀಟರ್ ಆನ್ ಮಾಡಿದ್ದು ಹೀಟರ್ ಕೆಟ್ಟು ಗ್ಯಾಸ್ ಹೊರಗೆ ಬಂದಿದ್ದ ಕಾರಣ ಅಲ್ಲಿದವರಿಗೆ ಉಸಿರುಗಟ್ಟಿದೆ.


ತಕ್ಷಣ ಅವರನ್ನು ಏರ್ ಲಿಪ್ಟ್ ಮೂಲಕ ಎಚ್.ಎ.ಎಂ.ಎಸ್. ಆಸ್ಪತ್ರೆ  ಸಾಗಿಸುವಾಗ ದಾರಿ ಮಧ್ಯದಲ್ಲಿಯೇ 8 ಮಂದಿ ಮೃತಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ