ಗಡಿ ವಿಚಾರ ಜಟಿಲಗೊಳಿಸಬೇಡಿ: ಭಾರತಕ್ಕೆ ಚೀನಾ ಎಚ್ಚರಿಕೆ

ಗುರುವಾರ, 13 ಆಗಸ್ಟ್ 2020 (13:24 IST)
ನವದೆಹಲಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಂಗವಾಗುವ ಯಾವುದೇ ಕೆಲಸ ಮಾಡಬೇಡಿ. ಗಡಿ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬೇಡಿ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ.


ಇತ್ತೀಚೆಗೆ ಗಡಿಯಲ್ಲಿ ಭಾರತ ತನ್ನ ರಕ್ಷಣೆಗಾಗಿ ರಫೇಲ್ ಯುದ್ಧವಿಮಾನ ಸೇರಿದಂತೆ ಹಗಲು-ರಾತ್ರಿ ಕಾವಲು ಪಡೆ ನಿಯೋಜಿಸಿರುವುದು, ಕಟ್ಟೆಚ್ಚರ ವಹಿಸಿರುವ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದಲ್ಲಿರುವ ಚೀನಾ ರಾಯಭಾರಿ ಜಿ ರೋಂಗ್ ಭಾರತವೂ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಬೇಕು. ಮಿಲಿಟರಿ, ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ಭಾರತವೂ ನಡೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ