ಚುನಾವಣೆ ನಡೆಸಲು ಹಣವಿಲ್ಲದ ಪರಿಸ್ಥಿತಿ : ಖವಾಜಾ ಆಸಿಫ್

ಮಂಗಳವಾರ, 28 ಮಾರ್ಚ್ 2023 (08:01 IST)
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಚುನಾವಣೆ ನಡೆಸುವುದಕ್ಕೂ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಬೇಸರ ವ್ಯಕ್ತಪಡಿಸಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಮ್ರಾನ್ ಖಾನ್ ಹತ್ಯೆ ಯತ್ನ ಸುಳ್ಳು ಆರೋಪವಾಗಿದೆ. ಇಮ್ರಾನ್ ಖಾನ್ ಪ್ರಾಂತೀಯ ಅಸೆಂಬ್ಲಿಗಳನ್ನು ಅಸಂವಿಧಾನಿಕವಾಗಿ ವಿಸರ್ಜಿಸಿದರು. ಆದರೆ ಅವರು ಅವಿಶ್ವಾಸ ಮತದ ಮೂಲಕ ಸಾಂವಿಧಾನಿಕವಾಗಿ ತಮ್ಮ ಸ್ಥಾನದಿಂದ ಹೊರಹಾಕಲ್ಪಟ್ಟರು. ಈಗ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಿಲ್ಲ ಎಂದು ಕಿಡಿಕಾರಿದರು.

ಇಮ್ರಾನ್ ಖಾನ್ ಪ್ರತಿದಿನ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಸರ್ಕಾರವು ಅವುಗಳನ್ನು ನಿಭಾಯಿಸುತ್ತಿದೆ. ಜೊತೆಗೆ ಪಾಕಿಸ್ತಾನವು ಈ ಎಲ್ಲಾ ಬಿಕ್ಕಟ್ಟುಗಳಿಂದ ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ