ಐಪಿಎಲ್ 14 ರಲ್ಲಿ ಮುಂಬೈ ಲೆಕ್ಕಾಚಾರ ಉಲ್ಟಾ ಮಾಡಿದವರು ಇವರೇ!

ಶನಿವಾರ, 9 ಅಕ್ಟೋಬರ್ 2021 (11:05 IST)
ದುಬೈ: ಪ್ರತೀ ಬಾರಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಗೆ ಈ ಐಪಿಎಲ್ ಒಂದು ಕೆಟ್ಟ ಕನಸಾಗಿದೆ. ಈ ಬಾರಿ ಹಾಲಿ ಚಾಂಪಿಯನ್ ಮುಂಬೈಗೆ ಪ್ಲೇ ಆಫ್ ಹಂತಕ್ಕೇರಲೂ ಸಾಧ್ಯವಾಗಿಲ್ಲ.


ಇದಕ್ಕೆ ಮುಖ್ಯ ಕಾರಣವಾಗಿದ್ದು, ಎರಡನೇ ಭಾಗದಲ್ಲಿ ಮುಂಬೈಗೆ ಕೈ ಕೊಟ್ಟ ಬ್ಯಾಟಿಂಗ್. ಸಾಮಾನ್ಯವಾಗಿ ಮುಂಬೈ ಶಕ್ತಿ ಎಂದರೆ ಯುವ ಬ್ಯಾಟ್ಸ್ ಮನ್ ಗಳಾದ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಜೊತೆಗೆ ಹಾರ್ದಿಕ್ ಪಾಂಡ್ಯ.

ಇವರು ಮೂವರೂ ಈ ಬಾರಿ ಕೈಕೊಟ್ಟಿದ್ದು, ಮುಂಬೈ ಬ್ಯಾಟಿಂಗ್ ಬಡವಾಗಿಸಿದೆ. ಇದರಿಂದಾಗಿ ಬೌಲರ್ ಗಳು ಎಷ್ಟೇ ಪ್ರಯತ್ನಪಟ್ಟರೂ ಸಾಕಷ್ಟು ರನ್ ಗಳಿಸಲಾಗದೇ ಹೆಚ್ಚಿನ ಪಂದ್ಯದಲ್ಲಿ ಮುಂಬೈ ಸೋಲು ಅನುಭವಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಗಳು ನಿರಾಶಾದಾಯಕವಾಗಿ ಐಪಿಎಲ್ 14 ಕ್ಕೆ ಮಂಗಳ ಹಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ